ಉಪ್ಪಿನಂಗಡಿ: ಮಳೆ-ಗಾಳಿ- ಮೆಸ್ಕಾಂಗೆ ಅಪಾರ ನಷ್ಟ

0

ಉಪ್ಪಿನಂಗಡಿ: ಈ ಭಾಗದಲ್ಲಿ ಗುರುವಾರ ರಾತ್ರಿ ಬೀಸಿದ ಭಾರೀ ಗಾಳಿ- ಮಳೆಗೆ ಮೆಸ್ಕಾಂನ ಉಪ್ಪಿನಂಗಡಿ ವಲಯ ವ್ಯಾಪ್ತಿಯಲ್ಲಿ 26 ಕಂಬಗಳು ಧರೆಗುರುಳಿದ್ದು, ಸುಮಾರು ಲಕ್ಷ ರೂ. ನಷ್ಟ ಸಂಭವಿಸಿದೆ. ಆತೂರು ಜಂಕ್ಷನ್, ಆತೂರು ಬೈಲು, ಕೊಯಿಲ ರೇಷ್ಮೆ -ಫಾರಂ, ಹಿರೇಬಂಡಾಡಿ ಸೇರಿದಂತೆ ರಾಮಕುಂಜ, ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಹಲವು ಮರಗಳು ಗಾಳಿಗೆ ಧರೆಗುರುಳಿವೆ. ಇದರಿಂದಾಗಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ. ಕೆಲವು ಕಡೆಗಳಲ್ಲಿ ಶುಕ್ರವಾರ ಮಧ್ಯಾಹ್ನದ ಮೇಲೆ ವಿದ್ಯುತ್ ಬಂದರೆ, ಇನ್ನು ಕೆಲವು ಕಡೆಗಳಲ್ಲಿ ಇನ್ನೂ ವಿದ್ಯುತ್ ಬಂದಿಲ್ಲ.


ಮರ ಬಿದ್ದು ಮನೆಗೆ ಹಾನಿ:
ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್‌ನ ಬೇರಿಕೆ ಶಾಂತಪ್ಪ ಪೂಜಾರಿ ಅವರ ಮನೆಗೆ ಮರ ಬಿದ್ದಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

LEAVE A REPLY

Please enter your comment!
Please enter your name here