ಅಡೂರು ನಿವಾಸಿ ನೆಟ್ಟಣಿಗೆ ಮುಡ್ನೂರಿನಲ್ಲಿ ಕುಸಿದು ಬಿದ್ದು ಮೃತ್ಯು

0

ಪುತ್ತೂರು: ಅಡೂರು ನಿವಾಸಿಯೊಬ್ಬರು ವಿಪರೀತ ಮದ್ಯ ಸೇವನೆಯಿಂದಾಗಿ ನೆಟ್ಟಣಿಗೆ ಮುಡ್ನೂರು ಗ್ರಾಮದ ಕುದ್ಕೋಳಿ ಎಂಬಲ್ಲಿ ನೀರು ಹೋಗುವ ಚರಂಡಿಗೆ ಕುಸಿದು ಬಿದ್ದು ಮೃತಪಟ್ಟ ಘಟನೆ ಮೇ 14ರಂದು ನಡೆದ ಬಗ್ಗೆ ವರದಿಯಾಗಿದೆ.

ಕಾಸರಗೋಡು ಅಡೂರು ಗ್ರಾಮದ ದಿ.ಅಲಾಮಿ ಎಂಬವರ ಪುತ್ರ ವೇಣು(50ವ.) ಮೃತಪಟ್ಟವರು. ಅವರು ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದು, ಮೇ 14ರಂದು ಮನೆಯಿಂದ ಹೋದವರು ಸಂಜೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಕುದ್ಕೋಳಿ ಎಂಬಲ್ಲಿ ನೀರು ಹೋಗುವ ಚರಂಡಿಗೆ ಕುಸಿದು ಬಿದ್ದಿದ್ದರು. ಘಟನೆ ಕುರಿತು ವ್ಯಕ್ತಿಯೊಬ್ಬರು ವೇಣು ಅವರ ಸಹೋದರ ಸುಧಾಕರ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದಂತೆ ಅವರು ಬಂದು ನೋಡಿದಾಗ ವೇಣು ಅವರು ಮೃತಪಟ್ಟಿದ್ದರು. ಘಟನೆ ಕುರಿತು ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here