ಮೇ 25: ಜಾತ್ರೋತ್ಸವಗಳ ಕಡೇದಿನ-ಬೆಟ್ಟಂಪಾಡಿ ದೇವಾಲಯದಲ್ಲಿ ಪತ್ತನಾಜೆ ಜಾತ್ರೆ – ಅಶ್ವತ್ಥೋಪನಯನ

0

ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷದ‌ ಕೊನೆಯ ಜಾತ್ರೆ ಪತ್ತನಾಜೆ ಜಾತ್ರೆಯು ಹಾಗೂ ಅಶ್ವತ್ಥೋಪನಯನ ಕಾರ್ಯಕ್ರಮ ಮೇ 25 ರಂದು ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಆ ಪ್ರಯುಕ್ತ ಮೇ 24 ರಂದು ಬಲಿವಾಡು ಶೇಖರಣೆ ನಡೆಯಲಿದೆ. ಮೇ 25 ರಂದು ಬೆಳಿಗ್ಗೆ ನವಕ‌ ಕಲಶಾಭಿಷೇಕ,‌ ತುಲಾಭಾರ ಸೇವೆ ನಡೆದು ಮಹಾಪೂಜೆಯಾಗಿ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ ಭಜನೆ, ಮಹಾಪೂಜೆಯಾಗಿ ದೇವರ ಉತ್ಸವ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣದಲ್ಲಿ ಮಹಾಪ್ರಸಾದ ವಿತರಣೆ ನಡೆಯಲಿದೆ.

ಅದೇ ದಿನ ಪೂರ್ವಾಹ್ನ 6 ಗಂಟೆಯಿಂದ ಕ್ಷೇತ್ರದ ವಠಾರದಲ್ಲಿರುವ ಅಶ್ವತ್ಥ ವೃಕ್ಷಕ್ಕೆ ಅಶ್ವತ್ಥೋಪನಯನ, ವಿವಾಹಾಂತ ಸಂಸ್ಕಾರ ಕ್ರಿಯಾ ಭಾಗ ಮತ್ತು ಅಶ್ವತ್ಥ ಕಲ್ಪೋಕ್ತ ಪೂಜೆ ನೆರವೇರಲಿದೆ. ಭಕ್ತಾದಿಗಳಿಗೆ ಸಂಕಲ್ಪ ಸಹಿತ ಅಶ್ವತ್ಥ ಕಲ್ಪೋಕ್ತ ಪೂಜೆ ಮಾಡಿಸಲು ಅವಕಾಶವಿದೆ ಎಂದು ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here