ಬೆಂಗಳೂರು ಬ್ಯಾರಿ ಜಮಾಅತ್ ಅಧ್ಯಕ್ಷರಾಗಿ ಡಾ|| ಎಂ.ಎ. ಅಬ್ದುಲ್ ಹಮೀದ್ ತೋಡಾರ್ ಆಯ್ಕೆ

0

ಪುತ್ತೂರು: ಬೆಂಗಳೂರು ಬ್ಯಾರಿ ಜಮಾ’ಅತ್ 2023-26 ನೇ ಸಾಲಿಗೆ ಅಧ್ಯಕ್ಷರಾಗಿ ಆರ್.ಟಿ.ನಗರದ ವೈದ್ಯರಾದ ಡಾ.ಎಂ.ಎ ಅಬ್ದುಲ್ ಹಮೀದ್ ತೋಡಾರ್ ಆಯ್ಕೆಯಾದರು. ಜಮಾತಿನ ಮದ್ರಸ ಸಭಾಂಗಣದಲ್ಲಿ ಜಮಾ’ಅತ್ ಅಧ್ತಕ್ಷರಾದ ಜ.ಇಬ್ರಾಹೀಮ್ ಇನೋಲಿ ರವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಜಮಾ’ಅತಿನ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು. ಉಪಾಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಕೊಡ್ಲಿಪೇಟೆ, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಎಂ. ಹುಸೈನ್ ಸಿರಾಜ್ ಆತೂರು, ಜತೆ ಕಾರ್ಯದರ್ಶಿಗಳಾಗಿ ಅಬ್ದುಲ್ ಲತೀಫ್ ಸಕಲೇಶಪುರ ಮತ್ತು ಮೌಲಾನ ತ್ವಾಹಾ ಅಲ್ ಅಝ್ಹರಿ ಬಿ.ಸಿ.ರೋಡ್, ಕೋಶಾಧಿಕಾರಿಯಾಗಿ ಮುಹಮ್ಮದ್ ರಿಝ್ವಾನ್ ಅಗ್ರಹಾರ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹಾಜಿ ಹೈದರ್ ಜೋಕಟ್ಟೆ, ಅಬ್ದುಲ್ ಹಕೀಮ್ ಉಕ್ಕುಡ, ಇಬ್ರಾಹೀಮ್ ಇನೋಲಿ, ಎ.ಬಿ ಮುಹಮ್ಮದ್ ಅರಳ, ಸವಾದ್ ಎಂ ಕುಂಞಿ ಉಜಿರೆ, ನಾಸಿರ್ ಹುಸೈನ್ ಪುತ್ತೂರು, ಅಹ್ಮದ್ ಶೆರೀಫ್ ವಗ್ಗ, ಅಡ್ವಕೇಟ್ ಲತೀಫ್ ಮುಂಡೋಳೆ, ಇಬ್ರಾಹೀಮ್ ಎ ಜೋಕಟ್ಟೆ, ಮುಹಮ್ಮದ್ ಯೂಸುಫ್ ಇಡ್ಯಾ, ಅಯ್ಯೂಬ್ ಮೂಡಿಗೆರೆ, ರಿಯಾಝ್ ಮೆಲ್ಕಾರ್ ರವರುಗಳ ಆಯ್ಕೆಗೂ ಸಭೆ ಅನುಮೋದನೆ ನೀಡಿತು.

ಸಭೆಯಲ್ಲಿ 2019-20 / 2020-21 / 2021-22 / 2022-23 ರ ಸಾಲಿನ ವಾರ್ಷಿಕ ವರದಿ ಮತ್ತು ವಾರ್ಷಿಕ ಆಯವ್ಯಯವನ್ನು ಜಮಾತ್ ಕಾರ್ಯದರ್ಶಿ ಸವಾದ್ ಎಂ ಕುಂಞಿ ಮಂಡಿಸಿದರು.

LEAVE A REPLY

Please enter your comment!
Please enter your name here