ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ಘಟಕದ ಸಭೆ-ಸಂಘದ ಸದಸ್ಯ ದಿ.ರವೀಂದ್ರ ಕಬಕರವರಿಗೆ ನುಡಿನಮನ

0

ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ಘಟಕದ ಸಭೆ ಹಾಗೂ ಸಂಘದ ಸದಸ್ಯರಾಗಿದ್ದ ದಿ.ರವೀಂದ್ರ ಕಬಕರವರಿಗೆ ನುಡಿನಮನ ಕಾರ್ಯಕ್ರಮ ನೆಲ್ಲಿಕಟ್ಟೆ ಮಾತೃಛಾಯಾ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಅಧ್ಯಕ್ಷತೆ ವಹಿಸಿ, ಮಾತನಾಡಿ, ನುಡಿನಮನ ಸಲ್ಲಿಸಿದರು. ಬಳಿಕ ಒಂದು ನಿಮಿಷ ಮೌನ ಪ್ರಾರ್ಥನೆ ನಡೆಸಲಾಯಿತು.

ಸಂಘದ ಮಾಜಿ ಅಧ್ಯಕ್ಷ ಯೂಸುಫ್ ರೆಂಜಲಾಡಿ, ಮಾಜಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ್ ಅನಿಕೂಟೇಲು, ಮಾಜಿ ಉಪಾದ್ಯಕ್ಷೆ ಶೈಲಜಾ ಸುದೇಶ್‌ರವರು ಮಾತನಾಡಿ ನುಡಿನಮನ ಸಲ್ಲಿಸಿದರು. ಸಂಘದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಉಪಾದ್ಯಕ್ಷ ಶರತ್ ಕುಮಾರ್ ಪಾರ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಶ್ರೀಧರ್ ರೈ ಕೋಡಂಬು ವಂದಿಸಿದರು. ಕೋಶಾಧಿಕಾರಿ ರಕ್ಷಿತಾ ನಾಯ್ಕ್, ಸದಸ್ಯರಾದ ಪಿ. ಸದಾಶಿವ ಭಟ್, ರಮೇಶ್ ಕೆಮ್ಮಾಯಿ, ಫಾರೂಕ್ ಶೇಖ್, ಮೋಹನ್ ಶೆಟ್ಟಿ, ತಾರನಾಥ್, ಕವಿತಾ, ಅಕ್ಷತಾ, ಶ್ವೇತಾ, ಚಿತ್ರಾಂಗಿಣಿ, ವೇದಾವತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here