ಸಹಿ ದುರುಪಯೋಗಪಡಿಸಿ ಸಾಲ ಪಡೆದು ವಂಚನೆ ಆರೋಪ; ನನ್ನ ಮೇಲೆ ದೂರು ದಾಖಲಾಗಿಲ್ಲ, ರಾಜಿ ಇತ್ಯರ್ಥವಾಗಿದೆ – ನವೀನ್ ಬನ್ನೂರು ಸ್ಪಷ್ಟನೆ

0

ಪುತ್ತೂರು:ಸಹೋದ್ಯೋಗಿಯ ಸ್ಯಾಲರಿ ಸ್ಲಿಪ್, ಆಧಾರ್, ಪಾನ್ ಕಾರ್ಡ್ ಸಹಿಯನ್ನು ದುರುಪಯೋಗ ಪಡಿಸಿ ಸಾಲ ಪಡೆದು ವಂಚನೆ ಮಾಡಿರುವ ಕುರಿತು ನನ್ನ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ಹಾಗೂ ಪ್ರಕರಣ ದಾಖಲಾಗಿರುವುದಿಲ್ಲ ಎಂದು ಪ್ರಕರಣದ ಆರೋಪಿಯಾಗಿ ಹೆಸರಿಸಲ್ಪಟ್ಟಿದ್ದ ನವೀನ್ ಬನ್ನೂರು ಎಂಬವರು ಸ್ಪಷ್ಟನೆ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಮಾತುಕತೆಯಲ್ಲಿ ಇತ್ಯರ್ಥವಾಗಿರುತ್ತದೆ. ಅಧಿಕೃತ ಪ್ರಕರಣ ದಾಖಲಾಗಿಲ್ಲ. ನನ್ನ ಮೇಲೆ ಉದ್ದೇಶಪೂರ್ವಕವಾಗಿ, ನನಗೆ ಆಗದವರು ದ್ವೇಷ ಸಾಧಿಸಲು ಈ ವಿಷಯವನ್ನು ವೈರಲ್ ಮಾಡಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಲು ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿರುತ್ತೇನೆ ಎಂದು ನವೀನ್ ಬನ್ನೂರುರವರು ತಿಳಿಸಿದ್ದಾರೆ.

ಮೆಸ್ಕಾಂ ಬನ್ನೂರು ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಅಟೆಂಡರ್ ಆಗಿ ಕಾರ್ಯನಿರ್ವಹಿಸುತ್ತಿರುವ ನವೀನ್ ಬನ್ನೂರು ಎಂಬವರ ವಿರುದ್ಧ ಅದೇ ಘಟಕದಲ್ಲಿ ಸ್ಟೋರ್ ಹೆಲ್ಪರ್ ಆಗಿ ಕಾರ್ಯನಿರ್ವಹಿಸುತ್ತಿರುವ ಯಶವಂತ ಗೌಡ ಎಂಬವರು ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದ ಕುರಿತು ಮೇ 23ರ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಗೆ ನವೀನ್ ಬನ್ನೂರು ಮೇಲಿನ ಸ್ಪಷ್ಟನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here