ಜೂ.6: ಒಡಿಯೂರು ಶ್ರೀ ವಿವಿಧ ಬಳಗದ ವಾರ್ಷಿಕೋತ್ಸವ, ಆಮಂತ್ರಣ ಬಿಡುಗಡೆ

0

ಪುತ್ತೂರು: ಒಡಿಯೂರು ಶ್ರೀ ಗುರುದೇವಾ ಬಳಗ, ವಜ್ರಮಾತಾ ಮಹಿಳಾ ಮಂಡಳಿ, ಗ್ರಾಮ ವಿಕಾಸ ಯೋಜನೆ ಹಾಗೂ ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಇವುಗಳ ಆಶ್ರಯದಲ್ಲಿ ಒಡಿಯೂರು ಶ್ರೀ ಬಳಗದ ವಾರ್ಷಿಕೋತ್ಸವದ ಪ್ರಯುಕ್ತ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಜೂ.6ರಂದು ಸತ್ಯದತ್ತ ವೃತ ಪೂಜಾ ಕಾರ್ಯಕ್ರಮ ನಡೆಯಲಿದೆ. ಇದರ ಆಮಂತ್ರಣ ಬಿಡುಗಡೆ ಮೇ.26 ರಂದು ಹೊಟೇಲ್ ಲಕ್ಷ್ಮೀ ಸಭಾಂಗಣದಲ್ಲಿ ನಡೆಯಿತು.

ಗುರುದೇವಾ ಸೇವಾ ಬಳಗದ ಗೌರವ ಸಲಹೆಗಾರ ಮೋನಪ್ಪ ಪೂಜಾರಿ ಹಾಗೂ ಜಯಪ್ರಕಾಶ್ ರೈರವರು ಸತ್ಯದತ್ತ ವೃತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಗುರುದೇವಾ ಸೇವಾ ಬಳಗದ ನೂತನ ಅಧ್ಯಕ್ಷ ಸುಧೀರ್ ನೋಂಡಾ, ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ, ವಜ್ರಮಾತಾ ಮಹಿಳಾ ಮಂಡಳಿ ಅಧ್ಯಕ್ಷೆ ನಯನಾ ರೈ, ಗುರು ದೇವಾ ಸೇವಾ ಬಳಗದ ಜೊತೆ ಕಾರ್ಯದರ್ಶಿ ಭವಾನಿ ಶಂಕರ ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ವ್ಯವಸ್ಥಾಪಕಿ ಪವಿತ್ರಪ್ರಸಾದ್, ಗ್ರಾಮ ವಿಕಾಸ ಯೋಜನೆ ಇದರ ಸಿಬ್ಬಂದಿ ಸುಶ್ಮಿತಾ ಹಾಗೂ ಲೆಕ್ಕ ಪರಿಶೋಧಕಿ ಹರ್ಷಿತಾ ಉಪಸ್ಥಿತರಿದ್ದರು. ಸತ್ಯಶಾಂತ ಪ್ರತಿಷ್ಠಾನದ ಶಾಂತಾ ಕುಂಟಿನಿ ಪ್ರಾರ್ಥನೆ ನೆರವೇರಿಸಿ, ಸುಧೀರ್ ನೋಂಡಾ ವಂದಿಸಿದರು.

ನೂತನ ಅಧ್ಯಕ್ಷರಾಗಿ ಸುಧೀರ್ ನೋಂಡಾ
ಗುರುದೇವಾ ಸೇವಾ ಬಳಗದ ನೂತನ ಅಧ್ಯಕ್ಷರಾಗಿ ಹೊಟೇಲ್ ಶ್ರೀಲಕ್ಷ್ಮೀ ಮಾಲಕ ಸುಧೀರ್ ನೋಂಡಾರವರನ್ನು ಆಯ್ಕೆ ಮಾಡಲಾಯಿತು. ಗುರುದೇವಾ ಸೇವಾ ಬಳಗದ ಅಧ್ಯಕ್ಷರಾಗಿದ್ದ ದೇವಪ್ಪ ನೋಂಡ ಅವರು ಕೆಲ ದಿನಗಳ ಹಿಂದೆ ನಿಧನರಾಗಿದ್ದರು. ತೆರವಾದ ಸ್ಥಾನಕ್ಕೆ ಅವರ ಮಗ ಸುಧೀರ್ ನೋಂಡ ಅವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here