ಸವಿತಾ ಸೌಹಾರ್ದ ಸಹಕಾರಿಯ ಪುತ್ತೂರು ಶಾಖೆ, ಸೌಂದರ್ಯವರ್ಧಕ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ

0

ಪುತ್ತೂರು: ಸವಿತಾ ಸೌಹಾರ್ದ ಸಹಕಾರಿಯ ಪುತ್ತೂರು ಶಾಖೆ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಮಾರಾಟ ಮಳಿಗೆ ಮೇ. 30ರಂದು ಪುತ್ತೂರು ಶಿವ ಆರ್ಕೇಡ್‌ನ ಪ್ರಥಮ ಅಂತಸ್ತಿನಲ್ಲಿ ಉದ್ಘಾಟನೆಗೊಂಡಿತು.


ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು ನೂತನ ಶಾಖೆಯನ್ನು ಮತ್ತು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಸಿ.ಡಿ.ಸಿಸಿ ಬ್ಯಾಂಕ್ ಮಂಗಳೂರು ಇದರ ನಿವೃತ್ತ ಡಿಜಿಎಂ ಉಗ್ಗಪ್ಪ ಶೆಟ್ಟಿ ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು. ಸವಿತಾ ಸೌಹಾರ್ದ ಸಹಕಾರಿಯ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ್ ಅವರು ಅಧ್ಯಕ್ಷತೆ ವಹಿಸಿದ್ದರು.ದ.ಕ.ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು, ಸವಿತಾ ಸಮಾಜದ ಪುತ್ತೂರು ತಾಲೂಕಕು ಅಧ್ಯಕ್ಷ ರಮೇಶ್ ಮರ, ಭಂಡಾರಿ ಸಮಾಜದ ಪುತ್ತೂರು ತಾಲೂಕು ಅಧ್ಯಕ್ಷ ಗಿರೀಶ್ ಕುಮಾರ್, ಉಜಿರೆಯ ರುಡ್ ಸೆಟ್ ನ ಗೆಸ್ಟ್ ಪ್ಯಾಕಲ್ಟಿ, ಶ್ರೀಮಾ ಪಾರ್ಲರ್‌ನ ಮಾಲಕಿ ಮಾಧವಿ ಮನೋಹರ್ ರೈ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಹಕಾರಿ ನಿರ್ದೇಶಕ ದಿನೇಶ್ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಂದ್ರ ಭಂಡಾರಿ, ಹಿರಿಯ ಸದಸ್ಯ ಬಾಬಣ್ಣ, ವೆಂಕಟೇಶ್ ಜಿ ಬಿ, ಪ್ರವೀಣ್ ಭಂಡಾರಿ ಸಂಪ್ಯ, ಚಂದ್ರಶೇಖರ್ ಪಡುಮಲೆ, ಶರತ್, ಸುಮ ಅತಿಥಿಗಳನ್ನು ಗೌರವಿಸಿದರು. ಶಾಖಾ ವ್ಯವಸ್ಥಾಪಕ ಕಿಶನ್ ಸರಪಾಡಿ ಸ್ವಾಗತಿಸಿದರು. ಪ್ರತಿಕ್ಷಾ ಭಂಡಾರಿ ಪ್ರಾರ್ಥಿಸಿದರು. ಕಿರಣ್ ಸರಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಸಹಕಾರಿ ನಿರ್ದೇಶಕರು ಮತ್ತು ಸಮಾಜ ಬಾಂದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here