ಜೂ.1: ಡಾ.ಪ್ರಭು ‘ಸ್ ಕೇರ್ ಆ್ಯಂಡ್ ಕ್ಯೂರ್ ಸ್ಪೆಶಾಲಿಟಿ ಕ್ಲಿನಿಕ್ , ಎ.ಎನ್ ಮೆಡಿಕಲ್ಸ್ ಶುಭಾರಂಭ

0

ಪುತ್ತೂರು : ವೈದ್ಯ ವೃತ್ತಿಯಲ್ಲಿ ಸುಮಾರು 9 ವರುಷಗಳ ಅನುಭವದ ಜೊತೆ , ಕಾರ್ಡಿಯಾಕ್ ,ನ್ಯೂರೋ ಹಾಗೂ ರೆಸ್ಪಿರೇಟರಿ ಸಮಸ್ಯೆಗಳಿಗೆ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಮೂಲಕವು ಪರಿಹಾರ ನೀಡಬಲ್ಲ , ಡಾ.ಪ್ರಭು ಎನ್ ಇವರ ಡಾ.ಪ್ರಭು’ಸ್ ಕೇರ್ ಆ್ಯಂಡ್ ಕ್ಯೂರ್ ಸ್ಪೆಶಾಲಿಟಿ ಕ್ಲಿನಿಕ್ ಹಾಗೂ ಎ.ಎನ್ .ಮೆಡಿಕಲ್ಸ್ ಜೂ.1 ರಂದು ಕೆ ಎಸ್ ಆರ್ ಟಿ ಸಿ ನಿಲ್ದಾಣ ಮುಂಭಾಗದ ಕೇಶವ ಶ್ರೀ ಶಾಪಿಂಗ್ ಸೆಂಟರಿನಲ್ಲಿ ಶುಭಾರಂಭಗೊಳ್ಳಲಿದೆ.


ಅನಿಲವತಿ ಹಾಗೂ ಪಿ. ನಾರಯಣ ಉದ್ಘಾಟನೆ ನೆರವೇರಿಸಲಿದ್ದು , ಶಾಸಕ ಆಶೋಕ್ ಕುಮಾರ್ ರೈ ,ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ,ಮಾಜಿ ಪುರಸಭಾ ಸದಸ್ಯ ರಾಜೇಶ್ ಬನ್ನೂರು , ಅಸ್ಟ್ರಾಲಜರ್ ವರ್ಧಮಾನ ಜೈನ್ , ಸಂಕೀರ್ಣದ ಮಾಲಕರಾದ ಅಜಿತ್ ನಾಯಕ್ ಹಾಗೂ ಪ್ರಕಾಶ್ ನಾಯಕ್ , ಮುಕ್ರಂಪಾಡಿ ಸಾಂತೋಮ್ ಗುರು ಮಂದಿರದ ರೆ. ಫಾ.ಸನ್ನಿ ಅಲಪತ್ತ್ ,ಕೊಳ್ತಿಗೆ ಮದ್ರಾಸಿ ಮೊಯಿದ್ದೀನ್ ಜುಮ್ಮಾ ಮಸೀದಿ ಗುರುಗಳಾದ ಇಲ್ಯಾಸ್ ಇರ್ಫಾನಿ ಸಾಲ್ಮರ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


ಉಚಿತ ಆರೋಗ್ಯ ತಪಾಸಣೆ :
ಶುಭಾರಂಭದ ಸಲುವಾಗಿ ಬೆಳಗ್ಗೆ ಗಂಟೆ 11 ರಿಂದ ಮಧ್ಯಾಹ್ಙ ಗಂಟೆ 2 ರ ತನಕ ಬಿ.ಪಿ ,ಶುಗರ್ ಹಾಗೂ ಅನೇಮಿಯಾ ಸ್ಕ್ರೀನಿಂಗ್ ಇವುಗಳ ತಪಾಸಣೆ ಉಚಿತವಾಗಿದ್ದು , ಇ ಸಿ ಜಿ ,ನೆಬ್ಯೂಲೈಶೇಷನ್ ,ಸುಟ್ಟ ಗಾಯಗಳ ಚಿಕಿತ್ಸೆ ಸಹಿತ ಬ್ರೈನ್ ,ಹಾರ್ಟ್ ಸಮಸ್ಯೆಗಳಿಗೂ ಚಿಕಿತ್ಸೆಗಳೂ ಲಭ್ಯ. ಔ಼ಷಧಿ ಮಳಿಗೆಯಲ್ಲಿ ಅಲೋಪಥಿಕ್ ,ಆಯುರ್ವೇದ ,ಜೆನ್ರಿಕ್ ,ವೆಟರ್ನರಿ ಔಷಧಿಗಳು ಹಾಗೂ ಸರ್ಜಿಕಲ್ ಉತ್ಪನ್ನಗಳು ಸಹ ಸಿಗಲಿವೆ.

LEAVE A REPLY

Please enter your comment!
Please enter your name here