ವಾರದೊಳಗೆ ಶಾಂತಿನಗರ-ನೆಕ್ಕಿಲಾಡಿ ರಸ್ತೆ ಹೊಂಡ ಮುಚ್ಚುವಂತೆ ಶಾಸಕರ ಸೂಚನೆ

0

ಪುತ್ತೂರು: ನೆಕ್ಕಿಲಾಡಿಯಿಂದ ಶಾಂತಿನಗರವರೆಗೆ ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚಿ ಸುಗಮ‌ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗುತ್ತಿಗೆದಾರರಿಗೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ.

ಈ ರಸ್ತೆಯುದ್ದಕ್ಕೂ ಹೊಂಡಗುಂಡಿಗಳು ತುಂಬಿದ್ದು, ಮಳೆ ಬಂದಾಗ ರಸ್ತೆ ಮಧ್ಯೆ ಹೊಂಡದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇದೇ ರಸ್ತೆಯನ್ನು ಡಾಮರೀಕರಣ ಮತ್ತು ಅಗಲೀಕರಣ ಮಾಡಲು ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಆರಂಭವಾಗದೇ ಇರುವ ಕಾರಣ ಮಳೆಗೆ ಮುಂಚಿತವಾಗಿ ಹೊಂಡಗಳನ್ನು ಮುಚ್ಚುವಂತೆ ಶಾಸಕರು ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here