ಕಡಬ: ಶ್ರೀ ಕಂಠಸ್ವಾಮಿ, ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜೂ.5 ರಂದು ಗೋ ಗೃಹದ ಪ್ರವೇಶ ಆಮಂತ್ರಣ ಪತ್ರ ಬಿಡುಗಡೆ

0

ಕಡಬ: ಇಲ್ಲಿನ ಶ್ರೀ ಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನೂತನವಾಗಿ ನಿರ್ಮಿಸಲಾದ ಗೋ ಗೃಹದ ಪ್ರವೇಶ ಕಾರ್ಯಕ್ರಮ ಜೂ.5ರಂದು ಗೋಧೂಳಿ ಲಗ್ನದಲ್ಲಿ ನಡೆಯಲಿದ್ದು,ಇದರ ಆಮಂತ್ರಣ ಪತ್ರಿಕೆಯನ್ನು ಜೂ.2ರಂದು ದೇವಸ್ಥಾನದ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುತ್ತುಕುಮಾರ್, ನಂದಿ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಸತೀಶ್ ನಾಯ್ಕ್ ಮೇಲಿನ ಮನೆ, ಕೋಶಾಧಿಕಾರಿ ಮಂಜುನಾಥ, ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ದೇವಸ್ಥಾನದ ಪ್ರಧಾನ ಅರ್ಚಕ ಕೇಶವ ಬೈಪಾಡಿತ್ತಾಯ, ಪ್ರತಿಷ್ಠಾನ ಸಮಿತಿಯ ಉಪಾಧ್ಯಕ್ಷ ದೇವರಾಜ್ ಸಾರಕೆರೆ, ಪ್ರಮುಖರಾದ ದಯಾನಂದ ನಾಯ್ಕ್, ಪ್ರಮೋದ್ ರೈ ನಂದುಗುರಿ, ಅಜಿತ್ ಆರ್ತಿಲ, ಶಿವಪ್ರಸಾದ್ ರೈ ಮೈಲೇರಿ, ಸೀತಾರಾಮ ಗೌಡ ಎ., ಸೀತಾರಾಮ ಕೆ., ಸಂತೋಷ್ ದೋಳ, ಪ್ರಸಾದ್ ಅಮೈ, ಬಾಲಚಂದ್ರ ಬಜೆತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here