ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ‘ಸನ್ಮತಿ’ ಶಿಕ್ಷಕರ ಕಲಿಕಾ ಕಾರ್ಯಾಗಾರ

0

ಅಧ್ಯಯನದ ವೈವಿಧ್ಯಮಯ ಸಾಧ್ಯತೆಗಳು ಅಧ್ಯಾಪನವನ್ನು ಪರಿಣಾಮಕಾರಿಯಾಗಿಸುತ್ತದೆ- ವಸಂತ ಸುವರ್ಣ


ಪುತ್ತೂರು : ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಆರಂಭಿಕ ಕಾರ್ಯಕ್ರಮವಾಗಿ ಶಿಕ್ಷಕರಿಗೆ ‘ಸನ್ಮತಿ’ ಕಲಿಕಾ ಕಾರ್ಯಾಗಾರ ನೆರವೇರಿತು.

ಮೂರು ದಿನಗಳ ಕಾರ್ಯಾಗಾರದಲ್ಲಿ ‘ಸಂವಿತ್’ ಸಂಶೋಧನಾ ಕೇಂದ್ರ ಬೆಂಗಳೂರು ಇಲ್ಲಿನ ಯೋಗ ವಿಭಾಗದ ಮುಖ್ಯಸ್ಥೆ ಡಾ.ಸಿಂಧೂ ಯೋಗ ಹಾಗೂ ಮೌಲ್ಯ ಶಿಕ್ಷಣವು ಪಠ್ಯ ವಿಷಯಗಳಲ್ಲಿ ಬೆಸೆದುಕೊಂಡಿದ್ದು ಇದನ್ನು ಗುರುತಿಸಿ ಮಕ್ಕಳಿಗೆ ಹೇಳಲು ಪ್ರತ್ಯೇಕ ಶಿಕ್ಷಕರ ಅಗತ್ಯವಿರುವುದಿಲ್ಲ. ಪ್ರತಿಯೊಬ್ಬ ಶಿಕ್ಷಕರು ಇದನ್ನು ಗುರುತಿಸಿ ತಮ್ಮಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ಜಿಲ್ಲಾ ಸಂಯೋಜಕ ಚಂದ್ರಶೇಖರ ಹಾಗೂ ಸಂಜಯ್‌ ಕಥಾ ಯೋಗ, ಗಾನ -ಯೋಗ , ನೃತ್ಯ-ಯೋಗಗಳಂತಹ ಸರಳ ಆಯಾಮ ಆಧಾರಿತ ವಿಷಯಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿಕೊಟ್ಟರು.

ಎರಡನೇ ದಿನ ಶಾಲಾ ವಾರ್ಷಿಕ ಯೋಜನೆಗಳ ಮಹತ್ವ ಮತ್ತು ಪರಿಣಾಮಕಾರಿ ಯೋಜನೆಗಳ ತಯಾರಿ ಹಾಗೂ ಅನುಷ್ಠಾನ ಸಂಬಂಧಿ ಸಂವಾದ ನಡೆಯಿತು. ಪ್ರತಿಯೊಬ್ಬ ಶಿಕ್ಷಕರು ಪಠ್ಯ, ಪಠ್ಯ ಪೂರಕ ಹಾಗೂ ಸ್ವ- ಅವಲೋಕನ ಸಂಬಂಧಿ ವಾರ್ಷಿಕ ಯೋಜನೆಗಳನ್ನು ತಯಾರಿಸಬೇಕಾದ ಅಗತ್ಯತೆಗಳನ್ನು ಚರ್ಚಿಸಲಾಯಿತು.

ಮೂರನೇ ದಿನದಂದು ಬೆಂಗಳೂರು ಆಪ್ತ ಸಲಹಾ ಕೇಂದ್ರದ ಆಪ್ತ ಸಲಹೆಗಾರರಾದ ಶುಭಾದಯಾನಂದ್ ಮತ್ತು ಶುಭ ಭಟ್‌ಇವರು ಆಪ್ತ ಸಲಹೆ ಯಾಕೆ? ಯಾರಿಗೆ? ಹೇಗೆ?ಎಂಬ ವಿಷಯದ ಬಗ್ಗೆ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದರು.ಪ್ರತಿಯೊಬ್ಬ ಶಿಕ್ಷಕರೂ ಆಪ್ತ ಸಲಹೆಗಾರರಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯ ಬೆಳವಣಿಗೆಯಲ್ಲಿ ಆಪ್ತ ಸಲಹೆಯ ಪಾತ್ರ ಮಹತ್ತರವಾದುದು ಎಂದು ತಿಳಿಸಿದರು.


ಬಂಟ್ವಾಳದ ಮೂಡಂಬೈಲು ಶಾಲೆಯ ಮುಖ್ಯ ಗುರು ಅರವಿಂದ ಕುಡ್ಲ ;ಪಕ್ಷಿ ಪ್ರಪಂಚದ ಕೌತುಕ’ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿ ಪ್ರಕೃತಿ ಸಂರಕ್ಷಣೆಯಲ್ಲಿ ಹಕ್ಕಿಗಳ ಮಹತ್ವ ಹಾಗೂ ನಮ್ಮ ಪಾತ್ರದ ಬಗ್ಗೆ ತಿಳಿಸಿದರು. ಅಳಿವಿನಂಚಿನಲ್ಲಿರುವ ಪಕ್ಷಿಗಳ ಪರಿಚಯ ಮಾಡಿಸುತ್ತಾ ವ್ಯಕ್ತಿ ಬದುಕು ಸರಳ ಮತ್ತು ಸಹಜವಾಗಿದ್ದಲ್ಲಿ ಪ್ರಕೃತಿ ಸಂರಕ್ಷಣೆಗೆ ಪ್ರತ್ಯೇಕ ತರಬೇತಿಗಳ ಅಗತ್ಯವಿಲ್ಲ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here