ನಿವೃತ್ತ ಎ.ಎಸ್.ಐ, ಆರ್ಯಾಪು ಗ್ರಾ.ಪಂ ಸದಸ್ಯ ರುಕ್ಮಯ್ಯ ಮೂಲ್ಯ ಹೃದಯಾಘಾತದಿಂದ ನಿಧನ

0

ಪುತ್ತೂರು: ಆರ್ಯಾಪು ಗ್ರಾ.ಪಂ ಸದಸ್ಯರಾಗಿರುವ ನಿವೃತ್ತ ಎ.ಎಸ್ಐ ಆರ್ಯಾಪು ಗೆಣಸಿನಕುಮೇರು ನಿವಾಸಿ ರುಕ್ಮಯ್ಯ ಮೂಲ್ಯ ಜೂ.6ರಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.


ಮಧ್ಯಾಹ್ನ ಮನೆಯಲ್ಲಿರುವ ವೇಳೆ ಕುಸಿದುಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆತರಲಾಗಿತ್ತಾದರೂ ಆಸ್ಪತ್ರೆಗೆ ತಲುಪುವ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಇವರು ಕಳೆದ ಗ್ರಾ.ಪಂ ಚುನಾವಣೆಯಲ್ಲಿ ಆರ್ಯಾಪು ಗ್ರಾ.ಪಂನ ಅರ್ಯಾಪು ಎರಡನೇ ವಾರ್ಡ್ ನಲ್ಲಿ ಸ್ಪರ್ಧಿಸಿ ಚುನಾಯಿತರಾಗಿದ್ದರು.
ಮೃತರು ಪತ್ನಿ ವಸಂತಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here