ಜೂ.7: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ, ಶ್ರೀ ನಾಗರಾಜ‌‌‌ ದೇವರ ಪುನಃ ಪ್ರತಿಷ್ಠೆ

0

ಪುತ್ತೂರು: ಕೊಡಿಪಾಡಿ‌ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ದೇವರ ಹಾಗೂ ಶ್ರೀ ನಾಗರಾಜ ದೇವರ ಪುನಃ ಪ್ರತಿಷ್ಠಾ ಕಾರ್ಯಕ್ರಮ ಜೂ.7 ರಂದು ನಡೆಯಲಿದೆ.

ಜೂ.6 ರಂದು ಬೆಳಗ್ಗೆ ಮಹಾಗಣಪತಿ ಹೋಮ, ಪವಮಾನ ಅಭಿಷೇಕ, ಮಹಾಗಣಪತಿ ದೇವರಲ್ಲಿ ಅನುಜ್ಞಾ ಪ್ರಾರ್ಥನೆ, ಸಂಹಾರ ತತ್ವ ಹೋಮ, ಜೀವ ಉದ್ವಾಸನೆ, ಶಯ್ಯ ಪೂಜೆ ಬಿಂಬ ಶುದ್ಧಿ, ಕಲಶಪೂಜೆ ನಡೆಯಿತು.

ಜೂ.7 ರಂದು ಬೆಳಗ್ಗೆ ಗಣಪತಿ ಹೋಮ, ನಾಗದೇವರ ಪ್ರತಿಷ್ಠಾ ಹೋಮ, 8:10 ರಿಂದ 8:45ರ ವರೆಗೆ ನಡೆಯುವ ಮಿಥುನ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಮಹಾಗಣಪತಿ ದೇವರ ಹಾಗೂ ಶ್ರೀ ನಾಗ ದೇವರ ಪುನರ್ ಪ್ರತಿಷ್ಠೆ ಪಂಚಾಮೃತ ಅಭಿಷೇಕ, ಕಲಶ ಅಭಿಷೇಕ, ಆಶ್ಲೇಷಾ ಬಲಿ, ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶ್ರೀ ಮಹಾಗಣಪತಿ ದೇವರಿಗೆ ಸಾರ್ವಜನಿಕ ಮಹಾರಂಗಪೂಜೆ,‌ ಪ್ರಸಾದ‌ ವಿತರಣೆ‌ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here