ದಿ. ಪ್ರವೀಣ್ ನೆಟ್ಟಾರುರವರ ಸ್ಮರಣಾರ್ಥ ನೆಟ್ಟಾರು ಹಿ.ಪ್ರಾ. ಶಾಲೆ, ಪಾಟಾಜೆ ಕಿ.ಪ್ರಾ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

0

ಪುತ್ತೂರು: ನೆಟ್ಟಾರು ಹಿ.ಪ್ರಾ. ಶಾಲೆ ಮತ್ತು ಪಾಟಾಜೆ ಕಿ.ಪ್ರಾ ಶಾಲಾ ಮಕ್ಕಳಿಗೆ ದಿ. ಪ್ರವೀಣ್ ನೆಟ್ಟಾರುರವರ ಸ್ಮರಣಾರ್ಥ ಅವರ ಮನೆಯವರಿಂದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನೆಟ್ಟಾರು ಶಾಲಾ ವಠಾರದಲ್ಲಿ ನಡೆಯಿತು.


ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕರು‌ ಮತ್ತು ಕನ್ನಡ ವಿಭಾಗ ಮುಖ್ಯಸ್ಥರಾದ ಡಾ.ಎಚ್. ಜಿ. ಶ್ರೀಧರ್, ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು‌ ಮತ್ತು ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಹರೀಶ್ ಶಾಸ್ತ್ರೀ,ಸ್ವಯಂ‌ ನಿವೃತ್ತ ಕಸ್ಟಮ್ ಅಧಿಕಾರಿ ಆರ್. ಕೆ. ಭಟ್ ಕುರುಂಬುಡೇಲು,ನೆಟ್ಟಾರು ಹಿ.ಪ್ರಾ ಶಾಲಾ ಮುಖ್ಯಶಿಕ್ಷಕಿ ಹರಣಾಕ್ಷಿ, ನೆಟ್ಟಾರು ಅಕ್ಷಯ ಯುವಕ ಮಂಡಲದ ಅಧ್ಯಕ್ಷರಾದ ಪದ್ಮನಾಭ ಕೋಡಿಬೈಲ್, ಶೇಖರ ಪೂಜಾರಿ ನೆಟ್ಟಾರು, ಶೀನಪ್ಪ ಪೂಜಾರಿ ಕುತ್ಯಾಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಜಯರಾಮ್‌ ಪೂಜಾರಿ ಕಾರ್ಯಾಡಿ,ಬಾಲಕೃಷ್ಣ ಪೂಜಾರಿ ಮುಂಡ್ಯ, ಸ್ವರ್ಣ, ದೀಪಕ್ ಕುಮಾರ್ ಮುಂಡ್ಯ, ಲೋಕೇಶ್ ಚಾವಡಿಬಾಗಿಲು,ಪ್ರವೀಣ್ ದಾಸನಮಜಲು ಮೊದಲಾದವರು ಹೂ ನೀಡಿ‌ ಅತಿಥಿಗಳನ್ನು ಗೌರವಿಸಿದರು. ನೂತನ ಪ್ರವೀಣ್ ನೆಟ್ಟಾರು ಸ್ವಾಗತಿಸಿ, ಸುಮಿತ್ ಕಾರ್ಯಾಡಿ ವಂದಿಸಿದರು. ವಸಂತ ನೆಟ್ಟಾರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here