ಜೂ.11ರಂದು ಆತೂರಿನಿಂದ ಶ್ರೀರಾಮಕುಂಜೇಶ್ವರನೆಡೆಗೆ ಪಾದಯಾತ್ರೆ

0

ರಾಮಕುಂಜ: ಜಲಕ್ಷಾಮ ನಿವಾರಣೆ ಹಾಗೂ ಲೋಕ ಸುಭಿಕ್ಷೆಗಾಗಿ ‘ನಮ್ಮ ನಡಿಗೆ ಶ್ರೀ ರಾಮಕುಂಜೇಶ್ವರನೆಡೆಗೆ’ ಪಾದಯಾತ್ರೆ ಜೂ.11ರಂದು ಬೆಳಿಗ್ಗೆ ಆತೂರಿನಿಂದ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ತನಕ ನಡೆಯಲಿದೆ.


ಬೆಳಿಗ್ಗೆ 7.45ಕ್ಕೆ ಆತೂರಿನಲ್ಲಿರುವ ಶ್ರೀ ದೇವರ ದ್ವಾರದ ಬಳಿಯಿಂದ ಪಾದಯಾತ್ರೆ ಆರಂಭಗೊಳ್ಳಲಿದೆ. ದೇವಸ್ಥಾನಕ್ಕೆ ಪಾದಯಾತ್ರೆ ತಲುಪಿದ ಬಳಿಕ ದೇವಸ್ಥಾನದಲ್ಲಿ ಸಾಮೂಹಿಕ ಸಂಪ್ರಾರ್ಥನೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಈ ಪಾದಯಾತ್ರೆಯಲ್ಲಿ ಗ್ರಾಮದ ಪ್ರತಿ ಮನೆಯ ಕನಿಷ್ಠ ಒಬ್ಬರು ಪಾಲ್ಗೊಳ್ಳಬೇಕು. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ಸಾಂಪ್ರದಾಯಿಕ ದಿರಿಸಿನೊಂದಿಗೆ ಬರಬೇಕು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here