ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಪ್ರಾಥಮಿಕ ತರಗತಿಗಳ ಆರಂಭೋತ್ಸವ

0

ಪುತ್ತೂರು: ವಿದ್ಯೆಯ ಅಧಿದೇವತೆ, ತಾಯಿ ಸರಸ್ವತಿಯ ಆರಾಧನೆಯು ಮನುಷ್ಯನಲ್ಲಿ ಜ್ಞಾನದ ಬೆಳವಣಿಗೆಗೆ ಕಾರಣವಾಗುತ್ತದೆ. ಶ್ವೇತವಸ್ತ್ರ ಧಾರಿಣಿಯಾದ ಸರಸ್ವತಿ‌ ದೇವಿಯ ಪೂಜೆಯನ್ನು ನೆಹರು ನಗರದಲ್ಲಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಇದೇ ಜೂನ್ 5ರಂದು ಭಕ್ತಿ ಪೂರ್ವಕವಾಗಿ ನಡೆಸಲಾಯಿತು. ಪುಟಾಣಿ ಮಕ್ಕಳನ್ನು ಆರತಿ ಎತ್ತಿ, ಕುಂಕುಮ ಹಚ್ಚಿ ಸ್ವಾಗತಿಸುವುದರೊಂದಿಗೆ ಪೂರ್ವ ಪ್ರಾಥಮಿಕ ತರಗತಿಗಳನ್ನು ಸಂಭ್ರಮದಿಂದ ಆರಂಭಿಸಲಾಯಿತು.

ಪ್ರಸ್ತುತ ಪೂಜಾ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವಸಂತಿ ಕೆ, ಸಂಚಾಲಕ ಭರತ್ ಪೈ, ಶಾಲಾ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು- ಶಿಕ್ಷಕೇತರ ವರ್ಗದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here