ಉಪ್ಪಿನಂಗಡಿ : ಅಮಲು ಪದಾರ್ಥ ಸೇವಿಸಿ ಅನುಚಿತ ವರ್ತನೆ- ಯುವಕನ ಬಂಧನ

0

ಉಪ್ಪಿನಂಗಡಿ : ಇಲ್ಲಿನ ಕುಮಾರಧಾರಾ ನದಿಯ ಹಳೇ ಸೇತುವೆಯಲ್ಲಿ ಮಾದಕ ಅಮಲು ಪದಾರ್ಥ ಸೇವನೆ ಮಾಡಿ, ಸಾರ್ವಜನಿಕವಾಗಿ ಹೀನಾಯ ಮಾತುಗಳನ್ನಾಡುತ್ತಾ ಅನುಚಿತ ವರ್ತನೆ ತೋರಿದ ನಿಜಾಮುದ್ದೀನ್ (21) ಎಂಬಾತನನ್ನು ಉಪ್ಪಿನಂಗಡಿ ಎಸೈ ರಾಜೇಶ್ ಕೆ ವಿ ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಿದ್ದಾರೆ.


ಬಂಧಿತ ನಿಜಾಮುದ್ದೀನ್ 34 ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಲು ಮನೆ ನಿವಾಸಿಯಾಗಿದ್ದು, ಮಾದಕ ದ್ರವ್ಯದ ಚಟಕ್ಕೆ ಒಳಗಾಗಿರುವ ಯುವಕನಾಗಿದ್ದಾನೆ. ಪ್ರಸಕ್ತ ಉಪ್ಪಿನಂಗಡಿ ಪರಿಸರದಲ್ಲಿ ಭಾರೀ ಪ್ರಮಾಣದಲ್ಲಿ ಮಾದಕ ದ್ರವ್ಯಗಳು ವಿಕ್ರಯಗೊಳ್ಳುತ್ತಿದ್ದು, ಹಲವಾರು ಮನೆಗಳ ಯುವಕ ಯುವತಿಯರು ಈ ಜಾಲಕ್ಕೆ ಬಲಿಯಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಕಳವಳ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here