ವಸತಿ ಯೋಜನೆಯ ಫಲಾನುಭವಿ ಗೀತಾ ಮೋನಪ್ಪರ ಖಾತೆಗೆ ಮೊದಲ ಕಂತಿನ ಹಣ ಬಿಡುಗಡೆಯಾಗಿದೆ-ಮುಂಡೂರು ಗ್ರಾ.ಪಂ ತುರ್ತು ಸಭೆಯಲ್ಲಿ ಅಧ್ಯಕ್ಷೆ ಪುಷ್ಪಾ ಎನ್ ಹೇಳಿಕೆ

0

ಪುತ್ತೂರು: ಗ್ರಾ.ಪಂ.ನಿಂದ ಸಿಗುವ ಅಂಬೇಡ್ಕರ್ ವಸತಿ ಯೋಜನೆಯ ಫಲಾನುಭವಿಯಾಗಿರುವ ಗೀತಾ ಮೋನಪ್ಪ ಅಜಲ ಕಡ್ಯ ಎಂಬವರಿಗೆ ವಸತಿ ಯೋಜನೆಯ ಕಂತಿನ ಹಣ ಬಿಡುಗಡೆ ಆಗಿಲ್ಲ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಸಾರ ಆಗಿದ್ದು ಇದು ಸತ್ಯಕ್ಕೆ ದೂರವಾದ ವಿಚಾರ. ಅವರಿಗೆ ಮೊದಲ ಕಂತಿನ ಹಣ 19-5-2023ಕ್ಕೆ ಜಮೆ ಆಗಿದ್ದು ಗ್ರಾ.ಪಂ ಬಗ್ಗೆ ಯಾರೂ ತಪ್ಪು ಮಾಹಿತಿ ಹೊಂದಿರಬಾರದು ಎಂದು ಮನವಿ ಮಾಡುತ್ತೇನೆ ಎಂದು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಹೇಳಿದರು.


ಜೂ.12ರಂದು ಮುಂಡೂರು ಗ್ರಾ.ಪಂ ಸಭಾಂಗಣದಲ್ಲಿ ತುರ್ತು ಸಭೆ ನಡೆಸಿ ಮಾತನಾಡಿದ ಅವರು ಗ್ರಾ.ಪಂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಗೀತಾ ಮೋನಪ್ಪರ ಖಾತೆಗೆ ಮೊದಲ ಕಂತಿನ ಹಣ ಅಕೌಂಟಿಗೆ ಬಂದಿದೆ ಎಂದು ಸ್ವತಃ ಫಲಾನುಭವಿಯೇ ತಿಳಿಸಿದ್ದಾರೆ ಎಂದು ಅವರು ಹೇಳಿದರು.


ತುರ್ತು ಸಭೆಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಫಲಾನುಭವಿ ಗೀತಾ ಮೋನಪ್ಪ ಅಜಲ ಮಾತನಾಡಿ ವಸತಿ ಯೋಜನೆಯ ಹಣ ನನ್ನ ಅಕೌಂಟಿಗೆ ಬಂದಿದೆ, ನಾನು ಮನೆಯಲ್ಲಿ ಇಲ್ಲದ ವೇಳೆ ನನ್ನ ಮನೆಯವರು ಮಾದ್ಯಮಗಳಿಗೆ ಬೇರೆ ಮಾಹಿತಿ ನೀಡಿದ್ದು ನನಗದು ತಿಳಿದಿರಲಿಲ್ಲ, ನನ್ನ ಅಕೌಂಟಿಗೆ 42 ಸಾವಿರ ರೂ ಬಂದಿದೆ ಎಂದು ತಿಳಿಸಿದ್ದಾರೆ. ಗ್ರಾ.ಪಂ ಪಿಡಿಓ ಗೀತಾ ಬಿ.ಎಸ್, ಕಾರ್ಯದರ್ಶಿ ಸೂರಪ್ಪ ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here