ಗೋಳಿತ್ತೊಟ್ಟು ಶಾಲಾ ವಿದ್ಯಾರ್ಥಿ ಸಂಸತ್ತು ಚುನಾವಣೆ

0

ನೆಲ್ಯಾಡಿ: ಗೋಳಿತ್ತೊಟ್ಟು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿ ಸಂಸತ್ತು ಚುನಾವಣೆಯು ನಡೆಯಿತು. ವಿದ್ಯಾರ್ಥಿಗಳಿಗೆ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿದ್ಯುನ್ಮಾನ ಮತಯಂತ್ರ ( ಮೊಬೈಲ್ ಆ್ಯಪ್) ಹಾಗೂ ಮತಪತ್ರಗಳನ್ನು ಬಳಸಿ ಚುನಾವಣೆಯನ್ನು ನಡೆಸಲಾಯಿತು.


ಶಾಲಾ ನಾಯಕ ಸ್ಥಾನಕ್ಕೆ 8 ನೇ ತರಗತಿಯ ಮೊಹಮ್ಮದ್ ಸಾದಿಕ್, ನವನೀತ್ ಎ, ಫಾತಿಮತ್ ಸನ ಹಾಗೂ ಫಾರಿಸ ಬಾನು ಸ್ಪರ್ಧಿಸಿದ್ದು, ಅತ್ಯಂತ ಹೆಚ್ಚು ಮತ ಪಡೆದ ನವನೀತ್ ಎ. ಶಾಲಾ ಮಂತ್ರಿಮಂಡಲದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಶಾಲಾ ಉಪನಾಯಕನ ಹುದ್ದೆಗೆ 7ನೇ ತರಗತಿಯ ಮಹಮ್ಮದ್ ಅನಾಸ್ ಹಾಗೂ ಆಯಿಷತ್ ಫಬೀನ ಸ್ಪರ್ಧಿಸಿದ್ದು, ಅತ್ಯಂತ ಹೆಚ್ಚು ಮತಗಳನ್ನುಗಳಿಸಿದ ಮಹಮ್ಮದ್ ಅನಸ್ ಶಾಲಾ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದನು. ಉಳಿದಂತೆ ಶಿಕ್ಷಣಮಂತ್ರಿಗಳಾಗಿ ಎಂಟನೇ ತರಗತಿಯ ಶಿಫಾನ ಮತ್ತು ಶರಣ್ಯ, ಸಾಂಸ್ಕೃತಿಕ ಮಂತ್ರಿಗಳಾಗಿ ರುತ್ವಿ ಮತ್ತು ಆರಾಧ್ಯ, ಆರೋಗ್ಯ ಮತ್ತು ಆಹಾರ ಮಂತ್ರಿಗಳಾಗಿ ಫಾತಿಮತ್ ಸನಾ ಮತ್ತು ಆಯಿಷತ್ ಫಬೀನಾ ಕ್ರೀಡಾಮಂತ್ರಿಯಾಗಿ ಎಂಟನೇ ತರಗತಿಯ ಮುಹಮ್ಮದ್ ಅನಸ್, ರಕ್ಷಣಾ ಮಂತ್ರಿಯಾಗಿ ನವನೀತ್ ಎ, ಮತ್ತು ಆಸಿಕ್, ನೀರಾವರಿ ಮಂತ್ರಿಗಳಾಗಿ ಮೊಹಮ್ಮದ್ ಸವಾದ್ ಮತ್ತು ಅಫ್ನಾನ್, ವಾರ್ತಾಮಂತ್ರಿಗಳಾಗಿ ಮುಫೀದಾ ಮತ್ತು ಶ್ರೀರಕ್ಷಾ, ಸ್ವಚ್ಚತಾ ಮಂತ್ರಿಗಳಾಗಿ ಮುಹಮ್ಮದ್ ಅನಸ್, ತಸ್ರೀಫಾ ಮತ್ತು ಕುಶಿ, ಗ್ರಂಥಾಲಯ ಮಂತ್ರಿಗಳಾಗಿ ಆಯಿಷತ್ ಹಯಿಫ ಮತ್ತು ಸಬ್‌ನಮ್, ತೋಟಗಾರಿಕಾ ಮಂತ್ರಿಗಳಾಗಿ ವಿವೇಕ್ ಮತ್ತು ಮುಹಮ್ಮದ್ ಸಾಲೀಮ್ ಆಯ್ಕೆಯಾದರು.


ಶಾಲಾ ಸಂಸತ್ತಿನ ನೂತನ ಸಭಾಪತಿಗಳಾಗಿ ಫಾತಿಮತ್ ಆರಿಫ ಹಾಗೂ ವಿರೋಧ ಪಕ್ಷದ ನಾಯಕರಾಗಿ 8ನೇ ತರಗತಿಯ ಫಾರಿಸರವರನ್ನು ಆಯ್ಕೆ ಮಾಡಲಾಯಿತು. ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವಿಕೆ, ಚುನಾವಣಾ ಪ್ರಚಾರ, ಮಾದರಿ ಮತದಾನ ಕೇಂದ್ರ ಹಾಗೂ ಮತದಾನ ಕೇಂದ್ರದ ಅಧಿಕಾರಿಗಳು, ಮತಪತ್ರ ಹಾಗೂ ವಿದ್ಯುನ್ಮಾನ ಮತಯಂತ್ರದ ಬಳಕೆ, ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಸೇರಿದಂತೆ ಚುನಾವಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ನೈಜ ಚುನಾವಣೆಯ ಅನುಭವವನ್ನು ಪಡೆಯುವುದರೊಂದಿಗೆ ಅನುಭವಾತ್ಮಕ ಕಲಿಕೆಗೆ ಸಾಕ್ಷಿಯಾದರು. ಶಾಲಾ ಸಂಸತ್ತಿನ ಚುನಾವಣೆಯನ್ನು ಶಾಲಾ ಮುಖ್ಯಗುರು ಜಯಂತಿ ಬಿ.ಎಂ.ರವರ ಮಾರ್ಗದರ್ಶನದಲ್ಲಿ ಶಿಕ್ಷಕರಾದ ಅಬ್ದುಲ್ ಲತೀಫ್ ಸಿ., ರವರ ನೇತೃತ್ವದಲ್ಲಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಜೋನ್ ಕೆ.ಪಿ, ಸೀಮಾ, ಸಚಿತಾ ಜಿ.ಕೆ., ತೇಜಸ್ವಿ ಅಂಬೆಕಲ್ಲು ಹಾಗೂ ಗೌರವ ಶಿಕ್ಷಕಿ ಯಶಸ್ವಿನಿರವರ ಸಹಕಾರದೊಂದಿಗೆ ನಡೆಸಲಾಯಿತು.

LEAVE A REPLY

Please enter your comment!
Please enter your name here