ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ಮೇಲ್ವಿಚಾರಕ ಕೃಷ್ಣ ಸಾಮಾನಿಯವರಿಗೆ ದೇವಳದ ವತಿಯಿಂದ ಬೀಳ್ಕೊಡುಗೆ

0

ಕೆಯ್ಯೂರು: ಕೆಯ್ಯೂರು ಗ್ರಾಮದ ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ಸುಮಾರು 27ವರ್ಷಗಳ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ ಕೃಷ್ಣಸಾಮಾನಿ ಕೆಯ್ಯೂರು ಇವರನ್ನು ದೇವಳದ ವತಿಯಿಂದ ಫಲಪುಷ್ಪ, ಹೂ ಶಾಲು, ಹಾಕಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ, ಸದಸ್ಯರಾದ ಶ್ರೀನಿವಾಸ ರಾವ್(ಅರ್ಚಕ), ರಾಮಣ್ಣ ಗೌಡ ಮಾಡಾವು, ಬಾಬುಪಾಟಾಳಿ ದೇರ್ಲ, ವಿಶ್ವನಾಥ ರೈ ಸಾಗು, ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ,  ಚರಣ್ ಕುಮಾರ್ ಸಣಂಗಳ, ಈಶ್ವರಿ ಜೆ.ರೈ ಸಂತೋಷ್  ನಗರ, ಮಮತಾ ಎಸ್ ರೈ ಕೆಯ್ಯೂರು, ಕೆಯ್ಯೂರು ಕಂದಾಯ ಇಲಾಖಾ ಗ್ರಾಮ ಲೆಕ್ಕಿಗ ಸ್ವಾತಿ , ಸಹಾಯಕ ನಾರಾಯಣ ಪಾಟಾಳಿ ದೇರ್ಲ, ದೇವಳದ ಅರ್ಚಕ ಆನಂದ ಭಟ್ ಕೆಯ್ಯೂರು, ಸಿಬ್ಬಂದಿಗಳಾದ ಚಂದ್ರಶೇಖರ ರೈ ಕಜೆ, ಜಯಕಾಂತ ಕುಲಾಲ್ ಕೆಯ್ಯೂರು, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here