ಎಸ್ಎಸ್ಎಲ್‌ಸಿ ಮರುಮೌಲ್ಯಮಾಪನ – ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಿವಾನ್ ಸಂಜಯ್ ತಾಲೂಕಿಗೆ ದ್ವಿತೀಯ, ದ.ಕ. ಜಿಲ್ಲೆಗೆ ತೃತೀಯ

0

ಪುತ್ತೂರು: ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮರುಮೌಲ್ಯಮಾಪನದ ಬಳಿಕ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿವಾನ್ ಸಂಜಯ್ ರವರು ಹೆಚ್ಚುವರಿ 2 ಅಂಕಗಳೊಂದಿಗೆ 622 ಅಂಕ ಪಡೆದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರನೇ ರಾಂಕ್ ಮತ್ತು ಪುತ್ತೂರು ತಾಲೂಕಿಗೆ ದ್ವಿತೀಯ ರಾಂಕ್ ಪಡೆದಿರುತ್ತಾರೆ. ಮರುಮೌಲ್ಯಮಾಪನದಲ್ಲಿ ಗಣಿತ ವಿಷಯದಲ್ಲಿ ಹೆಚ್ಚುವರಿ 1 ಅಂಕದೊಂದಿಗೆ 99 ಅಂಕಗಳು ಮತ್ತು ವಿಜ್ಞಾನ ವಿಷಯದಲ್ಲಿ ಹೆಚ್ಚುವರಿ 1 ಅಂಕದೊಂದಿಗೆ 99 ಅಂಕಗಳನ್ನು ಪಡೆದಿರುತ್ತಾರೆ. ಸಮಾಜ ವಿಜ್ಞಾನ ದಲ್ಲಿ 99 ಅಂಕ ಹಾಗೂ ಉಳಿದೆಲ್ಲಾ ಭಾಷಾ ವಿಷಯಗಳಲ್ಲಿ ಶೇಕಡಾ 100 ಅಂಕ ಪಡೆದು ಒಟ್ಟು 622 ಅಂಕಗಳನ್ನು ಪಡೆದಿರುತ್ತಾರೆ.
ಇವರು ಪಾಲ್ತಾಡಿ ರಮೇಶ್ ಮೊಗೇರ್ ರಾವ್ ಮತ್ತು ಕೃಪಾ ರಮೇಶ್ ದಂಪತಿ ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here