ದ.ಕ. ನೂತನ ಜಿಲ್ಲಾಧಿಕಾರಿಯಾಗಿ ಮುಲ್ಲೈ ಮುಹಿಲನ್ ನೇಮಕ

0

ಪುತ್ತೂರು: ದ.ಕ ಜಿಲ್ಲಾಧಿಕಾರಿ ಎಂ ಆರ್‌ ರವಿ ಕುಮಾರ್‌ ಮತ್ತು ದ.ಕ ಜಿ.ಪಂ ಸಿಇಓ ಕುಮಾರ್‌ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ದ.ಕ ನೂತನ ಜಿಲ್ಲಾಧಿಕಾರಿಯಾಗಿ ಎಂ.ಪಿ. ಮುಲ್ಲೈ ಮುಹಿಲನ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಆದರೆ ರವಿಕುಮಾರ್ ಅವರಿಗೆ ಸ್ಥಳ ‌ನಿಯೋಜನೆಯ ಮಾಹಿತಿ ಲಭ್ಯವಾಗಿಲ್ಲ. ದ.ಕ ಜಿ.ಪಂ ಸಿಇಓ ಕುಮಾರ್ ಅವರನ್ನು ಮಂಡ್ಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದ್ದು, ಉಳಿದಂತೆ ಐಎಎಸ್ ಅಧಿಕಾರಿಗಳಾದ ಪಲ್ಲವಿ ಅಕುರತಿ, ಡಾ.ವೆಂಕಟೇಶ್ ಎಂ, ರವೀಂದ್ರ ಪಿ.ಎನ್, ಕೆ. ಶ್ರೀನಿವಾಸ್, ಜಾನಕಿ ಕೆ ಎಂ, ಯೋಗೇಶ್‌ ಎ ಎಂ. ಪ್ರಭು ಜಿ, ನವೀನ್‌ ಕುಮಾರ್‌ ರಾಜು ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ನೀಡುವ ಮೂಲಕ ಆಡಳಿತ ವ್ಯವಸ್ಥೆಗೆ ಸರ್ಜರಿ ಮಾಡಿದೆ.

LEAVE A REPLY

Please enter your comment!
Please enter your name here