ರಾಮಕುಂಜ: ‘ಕಸ್ವಿ ಹಸಿರು ದಿಬ್ಬಣ’ ವತಿಯಿಂದ ಉಚಿತ ಗಿಡ ವಿತರಣೆ

0

ರಾಮಕುಂಜ: ರಾಮಕುಂಜ ಗ್ರಾಮದ ಕೇಶವ ಕಾರಿಜಾಲ್ ಅವರ ಪುತ್ರಿ ಬೇಬಿ ಕಸ್ವಿಯ 2ನೇ ವರುಷದ ಹುಟ್ಟು ಹಬ್ಬದ ಪ್ರಯುಕ್ತ “ಕಸ್ವಿ ಹಸಿರು ದಿಬ್ಬಣ” ಇದರ ವತಿಯಿಂದ ಹುಟ್ಟುಹಬ್ಬ ಹೊಸ ಪೀಳಿಗೆಯ ಉಸಿರಾಗಲಿ ಎಂಬ ದ್ಯೇಯದೊಂದಿಗೆ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಹುಟ್ಟುಹಬ್ಬವನ್ನ ಆಚರಿಸಲಿರುವ ಸುಮಾರು 76 ವಿದ್ಯಾರ್ಥಿಗಳಿಗೆ ಉಚಿತವಾಗಿ ಗಿಡಗಳನ್ನು ನೀಡಲಾಯಿತು.


ಕಾರ್ಯಕ್ರಮದ ರೂವಾರಿ ಕೇಶವ ಕಾರಿಜಾಲ್ ಅವರು ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿಯ ಕುರಿತು ಮಾಹಿತಿ ನೀಡುವುದರ ಜೊತೆಗೆ “ಕಸ್ವಿ ಹಸಿರು ದಿಬ್ಬಣ” ಚಾರಿಟೇಬಲ್ ಟ್ರಸ್ಟ್‌ನ ಆಶಯವನ್ನು ವಿದ್ಯಾರ್ಥಿಗಳೊಡನೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಯಾದ ಗಣೇಶ್ ಕಟ್ಟಪುಣಿ ಹಾಜರಿದ್ದರು. ಶಾಲಾ ಮುಖ್ಯಗುರು ಸತೀಶ್ ಭಟ್, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here