ಮತಾಂತರ ನಿಷೇಧ ಕಾಯ್ದೆ ಹಿಂಪಡೆದ ಕಾಂಗ್ರೆಸ್ ಸರಕಾರದ ವಿರುದ್ಧ ವಿಶ್ವಹಿಂದು ಪರಿಷತ್, ಬಜರಂಗದಳ ಪ್ರತಿಭಟನೆ

0

ರಾಜ್ಯಪಾಲರ ಮನೆ ಮುಂದೆ ಅಮರನಾಂತ ಉಪವಾಸ ಕೂತಾದರೂ ಕಾಯಿದೆ ಹಿಂಪಡೆಯುವುದನ್ನು ತಡೆಯುತ್ತೇವೆ-ಮುರಳಿಕರಷ್ಣ ಹಸಂತಡ್ಕ

ಪುತ್ತೂರು: ಈ ಹಿಂದೆ ಬಿಜೆಪಿ ಸರಕಾರ ತಿದ್ದುಪಡಿ ಮಾಡಿರುವ ಬಲವಂತದ ಮತಾಂತರ ನಿಷೇಧ ಕಾಯಿದೆಯನ್ನು ಕಾಂಗ್ರೆಸ್ ಸರಕಾರ ಹಿಂಪಡೆದುಕೊಂಡಿದೆ. ಇದಕ್ಕೆ ರಾಜ್ಯ ಪಾಲರ ಸಹಿಯಾಗಬೇಕಿದೆ. ವಿಧಾನ ಸಭಾ ಅಧಿವೇಶನದಲ್ಲಿ ಮಂಜೂರುಗೊಳಿಸುವ ಶಕ್ತಿಯೂ ನಿಮ್ಮಲ್ಲಿದೆ. ಆದರೆ ನಮ್ಮ ಸಂಘಟನೆಯ ನೇತೃತ್ವದಲ್ಲಿ ರಾಜ್ಯಪಾಲರ ಮನೆ ಮುಂದೆ ಅಮರನಾಂತ ಉಪವಾಸ ಕೂತಾದರೂ ಈ ಕಾಯಿದೆಯನ್ನು ಹಿಂಪಡೆಯುವುದನ್ನು ತಡೆಯುವುದಾಗಿ ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಸಿದರು.

ರಾಜ್ಯ ಕಾಂಗ್ರೆಸ್ ಸರಕಾರ ಮತಾಂತರ ನಿಷೇಧ ಕಾಯಿದೆಯನ್ನು ಹಿಂಪಡೆಯುವುದರ ವಿರುದ್ಧ ವಿಶ್ವಹಿಂದು ಪರಿಷತ್ ಬಜರಂಗದಳದ ವತಿಯಿಂದ ಜೂ.19ರಂದು ಸಂಜೆ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಹಿಂದಿನ ಬಿಜೆಪಿ ಸರಕಾರ ಜಾರಿತಂದ ಕಾಯಿದೆಯನ್ನು ಸಚಿವ ಸಂಪುಟದಲ್ಲಿ ಹಿಂಪಡೆಯುವ ನಿರ್ಣಯ ಮಾಡಿ ಸರಕಾರ ಪ್ರಯತ್ನ ಮಾಡಿದೆ. ಹಿಂದು ಸಮಾಜ ನಿದ್ದೆ ಮಾಡುತ್ತಿಲ್ಲ.

ಉತ್ತರ ಕೊಡುವ ಹಿಂದು ಸಮಾಜವಾಗಿದೆ ಎಂದು ಎಚ್ಚರಿಸಲು ಪ್ರತಿಭಟನೆ ನಡೆಯುತ್ತಿದೆ. ಹಿಂದು ಸಮಾಜದ ಅಸ್ಮಿತೆಗೆ, ನಂಬಿಕೆಗಳಿಗೆ ದಕ್ಕೆ ಆದಾಗ ಎಲ್ಲರನ್ನು ಒಟ್ಟು ಸೇರಿಸಿ ಹೋರಾಟ ನಡೆಸಲಾಗುವುದು. ತಿರುಪತಿ ಉಳಿಸಲು ನಡೆದ ಹೋರಾಟ, ರಾಮಸೇತು ಭಂಗದ ವಿರುದ್ಧ ನಡೆದ ಹೋರಾಟ ಮಾದರಿಯಲ್ಲಿ ನಡೆಯಲಿದೆ ಎಂದು ಎಚ್ಚರಿಸಿದರು.

ಬಲವಂತದ ಮತಾಂತರ ಮಾತ್ರ ಶಿಕ್ಷಾರ್ಹ ಅಪರಾಧ ಎಂದು ಬಿಜೆಪಿ ಸರಕಾದ ತಿದ್ದುಪಡಿ ಮಾಡಿದ ಕಾಯಿದೆಯಲ್ಲಿತ್ತು. ಇದನ್ನು ಕಾಂಗ್ರೆಸ್ ಸರಕರಾ ಹಿಂಪಡೆದುಕೊಂಡು ಬಲವಂತವಾಗಿ, ಆಸೆ ಒಡ್ಡಿಯೂ ಮತಾಂತರ ಮಾಡಲು ಅವಕಾಶ ನೀಡಿದೆ. ಉಚಿತವಾಗಿ ಉಚಿತ ಕೊಡುಗೆಗಳನ್ನು ನೀಡುವ ಮಾದರಿಯಲ್ಲಿ ಸರಕಾರ ಮತಾಂತರವನ್ನು ಉಚಿತವಾಗಿ ನೀಡದ್ದಾರೆ. ಹಿಂದುಗಳ ಭಾವನೆಗಳಲ್ಲಿ ಚೆಲ್ಲಾಟವಾಡಬೇಡಿ, ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ನಾವು ಯಾವುದೇ ಹೋರಾಟ, ತ್ಯಾಗ, ಬಲಿದಾನಗಳನ್ನು ಮಾಡಿಯಾದರೂ ಹಿಂದೂ ಸಮಾಜದ ಅಸ್ಮಿತೆ, ನಂಬಿಕೆ ಉಳಿಸಿಕೊಳ್ಳಲು ಸಿದ್ದವಾಗಿದೆ.

ಹಿಂದೂ ಸಮಾಜದ ದಬ್ಬಾಳಿಕೆ ತಡೆಯಲಿ ಕಾರ್ಯಕರ್ತರು ಕೈಜೋಡಿಸಲಿದ್ದಾರೆ. ಹಿಂದೂ ಸಮಾಜವನ್ನು ಭಾವನೆಗಳನ್ನು ಗುರಿಯಾಗಿಸಿ ಉತ್ತಮ ಪಠ್ಯ ವಿಚಾರಗಳನ್ನು ಕೈ ಬಿಟ್ಟಿದ್ದಾರೆ ಎಂದು ಆರೋಪಿಸಿದ ಅವರು ಈ ನಿರ್ಧಾರವನ್ನು ವಿಶ್ವಹಿಂದು ಪರಿಷತ್ ಖಂಡಿಸುತ್ತದೆ. ಈ ನಿರ್ಧಾರವನ್ನು ಹಿಂಪಡೆಯದಿದ್ದರೆ ಹಲವು ಧರಣಿ, ಹೋರಾಟ, ಸಮಾವೇಶ, ಉಪಾವಾಸ ಸತ್ಯಾಗ್ರಹದ ಮೂಲಕ ನಿಮ್ಮ ದೂರ್ತತನದ, ಅಹಂಕಾರದ ಕೆಲಸವನ್ನು ತಡೆಯುವ ಕೆಲಸ ಮಾಡಲಿದೆ ಎಂದು ಎಚ್ಚರಿಸಿದರು.

ನಮ್ಮ ಮನೆಯಲ್ಲಿಯೇ ನಮಗೆ ಸ್ವಾತಂತ್ರ್ಯ ಇಲ್ಲದ ಪರಿಸ್ಥಿತಿ ಬರಬಹುದು-ಮಹಾಬಲೇಶ್ವರ ಸ್ವಾಮೀಜಿ
ಕಣಿಯೂರು ಶ್ರೀ ಚಾಮುಂಡೇಶ್ವರಿ ಮಠದ ಶ್ರೀ ಮಹಾಬಲೇಶ್ವರ ಸ್ವಾಮಿತಿ ಮಾತನಾಡಿ, ಅವ್ಯಾಹತವಾಗಿ ಸರಕಾರದ ಒಪ್ಪಿಗೆ ಇದ್ದರೆ ಮತಾಂತರ ನಡೆದೇ ನಡೆಯುತ್ತದೆ. ಈಗಲೂ ನಡೆಯುತ್ತಿದೆ. ಗೋವುಗಳನ್ನು ಕಳ್ಳತನ ಮಾಡುವುದನ್ನು ತಡೆದವರ ವಿರುದ್ದವೇ ಕೇಸು, ಶಿಕ್ಷೆಯಾದರೆ ರಾಜ್ಯದ ಪರಿಸ್ಥಿತ ಏನಾಗಬಹುದು. ನಮ್ಮ ಮನೆಯಲ್ಲಿಯೇ ನಮಗೆ ಸ್ವಾತಂತ್ರ್ಯ ಇಲ್ಲದ ಪರಿಸ್ಥಿತಿ ಬರಬಹುದು. ಮತಾಂತರ ಪಿಡುಗು ಸಾಮಾನ್ಯದಲ್ಲ.

ಮತಾಂತರ ಆದರೆ ನಾಲ್ಕು ಗೋಡೆಗಳ ಮಧ್ಯೆ ನರಕಯಾತನೆ ಅನುಭವಿಸಬೇಕು. ಹೀಗಾಗಿ ನಾವು ಎಚ್ಚೆತ್ತುಕೊಳ್ಳಬೇಕು. ನಮ್ಮ ಮನವಿ, ಯಾತನೆ, ಆಕ್ರೋಷ, ವೇದನೆಗಳನ್ನು ಸರಕಾರಕ್ಕೆ ಮುಟ್ಟಿಸಬೇಕು. ಹಿಂದು ಬಂಧುಗಳನ್ನೇ ನಮ್ಮ ಮತ ನೀಡಿ ಕಳಿಸಿಕೊಟ್ಟಿದ್ದೇವೆ. ನಾವೂ ಹಿಂದುಗಳು, ಧರ್ಮವನ್ನು ರಕ್ಷಿಸಬೇಕು ಎಂದು ಅವರು ಅರಿತಿರಬೇಕು. ಈ ಹಿಂದೆಯೂ ಹಲವು ಹೋರಾಟ, ಪ್ರತಿಭಟನೆ ನಡೆಸಿ ಯಶಸ್ವಿ ಕಂಡವರು. ಮುಂದೆಯೂ ಅಲ್ಲಲ್ಲಿ ಪ್ರತಿಭಟನೆಗಳ ನಡೆಯಬೇಕು. ಪ್ರತಿಯೊಬ್ಬ ಸಂತರು ಒಟ್ಟಾಗಿ ಎಚ್ಚರಿಸಬೇಕು ಎಂದರು.

ಹಿಂದು ಧರ್ಮದ ದಬ್ಬಾಳಿಕೆಗೆ ಕೈ ಹಾಕಬೇಡಿ-ಡಾ.ಕೃಷ್ಣಪ್ರಸನ್ನ
ವಿಶ್ವಹಿಂದು ಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿ, ಮತಾಂತರದಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯಕ್ಕೆ ದಕ್ಕೆಯಾಗಲಿದೆ. ಮತಾಂತರವನ್ನು ಮಹಾತ್ಮ ಗಾಂಧಿಜಿಯವರು ವಿರೋಧಿಸಿದ್ದರು. ಆದರೆ ನಾವು ಗಾಂಧಿಜಿಯವರ ಅನುಯಾಯಿಗಳು ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಗಾಂಧಿಜಿಯವರ ಮಾತುಕೇಳುತ್ತಿಲ್ಲ. ಕಾಂಗ್ರೆಸ್ ಕೈಯಲ್ಲಿ ಅಧಿಕಾರವಿದೆ ಎಂದು ಹಿಂದೂ ಧರ್ಮದ ಮೇಲೆ ದಬ್ಬಾಳಿಕೆಗೆ ಕೈ ಹಾಕಬೇಡಿ. ಮತಾಂತರಕ್ಕೆ ಅವಕಾಶ ನೀಡಿದರೆ ರಾಜ್ಯದಾದ್ಯಂತ ವಿಶ್ವಹಿಂದು ಪರಿಷತ್ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.

ಜಿ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಾಜಿ ಸದಸ್ಯರಾದ ಹರೀಶ್ ಬಿಜತ್ರೆ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ನಗರ ಸಭಾ ಮಾಜಿ ಉಪಾಧ್ಯಕ್ಷೆ ವಿದ್ಯಾ ಗೌರಿ, ಪೂಡಾ ಅಧ್ಯಕ್ಷ ಬಾಮಿ ಅಶೋಕ್ ಶೆಣೈ, ನಗರ ಸಭಾ ಸದಸ್ಯ ಮನೋಹರ್ ಕಲ್ಲಾರೆ, ಮಾಜಿ ಸದಸ್ಯ ರಾಜೇಶ್ ಬನ್ನೂರು, ಜನಾರ್ಧನ ಬೆಟ್ಟ, ಜಯಂತಿ ನಾಯಕ್, ಪ್ರೇಮಲತಾ ರಾವ್, ಜಯಶ್ರೀ ಶೆಟ್ಟಿ, ಶ್ರೀಧರ ತೆಂಕಿಲ, ಕಿರಣ್ ಶೆಟ್ಟಿ, ದಿನೇಶ್ ಪಂಜಿಗ, ಪುನೀತ್ ಮಾಡತ್ತಾರು, ಸಚಿನ್ ಶೆಣೈ, ಹರೀಶ್ ದೋಳ್ಪಾಡಿ, ಅಜಿತ್ ರೈ ಹೊಸಮನೆ, ರಾಘವೇಂದ್ರ ಅಂದ್ರಟ್ಟ, ನಾಗೇಶ್ ಟಿ.ಎಸ್., ಮಧುಸೂದನ ಪಡ್ಡಾಯೂರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ನವೀನ್ ನೆರಿಯ ಸ್ವಾಗತಿಸಿದರು.

LEAVE A REPLY

Please enter your comment!
Please enter your name here