ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನಲ್ಲಿ ಇಂದ್ರ ಕಲಾ ವೈಭವ

0

ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಪ್ರತಿಭಾಣ್ವೆಷಣೆ ಕಾರ್ಯಕ್ರಮ ಇಂದ್ರ ಕಲಾ ವೈಭವ ಜೂ.20ರಂದು
ಜರಗಿತು. ಇಂದ್ರಪ್ರಸ್ಥ ಸಂಸ್ಥೆಯ ಅಧ್ಯಕ್ಷ ಕರುಣಾಕರ ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸ್ಥೆಯ ಸಂಚಾಲಕ ಶ್ರೀ ಯು . ಜಿ. ರಾಧ ಎಲಾ ವಿದ್ಯಾರ್ಥಿಗಳಿಗೆ ಶುಭ
ಹಾರೈಸಿದರು .

ಸಮಾರಂಭದಲ್ಲಿ ಪ್ರೌಢಶಾಲಾ ಹಂತದಲ್ಲಿ ವಿವಿಧ ಕ್ಷೇತ್ರಗಳಲಿ ಸಾಧನೆ ಮಾಡಿದ ಪ್ರಥಮ ಪಿ.ಯು ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ
ಶೈಕ್ಷಣಿಕ ಸಲಹೆಗಾರ ರಾಜೇಶ್ ಪೈ , ಆಡಳಿತ ಮಂಡಳಿ ಸದಸ್ಯ ಏಕವಿದ್ಯಾದರ ಜೈನ್ ಹಾಗೂ ಪ್ರಾಂಶುಪಾಲ ಶ್ರೀ ಹೆಚ್ ಕೆ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ
ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ವಿವಿಧ ಕಲಾ ಪ್ರದರ್ಶಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಯಶಸ್ವಿನಿ ಎಮ್
ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here