ಸುಳ್ಯಪದವು: ಕೆರೆಗೆ ಬಿದ್ದು ಮೃತ್ಯು

0

ಪುತ್ತೂರು: ವ್ಯಕ್ತಿಯೊಬ್ಬರು ತೋಟದ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಸುಳ್ಯಪದವು ಕಜೆಮೂಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ನೆಟ್ಟಣಿಗೆ ಗ್ರಾಮದ ಆದೂರು ಬೀರಮೂಲೆ ನಿವಾಸಿ ನಾರಾಯಣ ನಾಯ್ಕ(75ವ)ರವರು ಮೃತಪಟ್ಟವರು.ಅವರು ಸುಳ್ಯಪದವು ಕಜೆಮೂಲೆ ವೆಂಕಟೇಶ್ವರ ಭಟ್ ಎಂಬವರ ತೋಟದ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಮನೆಯಿಂದ ಹೋದ ಅವರು ನಾಪತ್ತೆಯಾಗಿದ್ದ ಕುರಿತು ಅವರ ಮನೆ ಮಂದಿ ಆದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜೂ.22ರಂದು ವೆಂಕಟೇಶ್ವರ ಭಟ್ ಅವರ ತೊಟದ ಕೆಲಸದಾಳು ಕೆರೆಯ ಸಮೀಪ ಹೋದಾಗ ಅಲ್ಲಿ ಮೃತದೇಹವೊಂದು ಪತ್ತೆಯಾಗಿದೆ.

ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿ ಪರಿಶೀಲಿಸಿದಾಗ ನಾರಾಯಣ ನಾಯ್ಕ ಅವರ ಮೃತದೇಹ ಎಂದು ಗುರುತಿಸಲಾಗಿದೆ.ಮೃತರು ಪತ್ನಿ ಮತ್ತು 7 ಮಂದಿ ಮಕ್ಕಳನ್ನು ಅಗಲಿದ್ದಾರೆ.ಘಟನೆ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here