ವಿವೇಕಾನಂದ ಆ ಮಾ ಶಾಲೆಯ 10ನೇ ತರಗತಿಯ ಮಕ್ಕಳ ಪೋಷಕರ ಸಭೆ

0

ಪುತ್ತೂರು: ಮಗುವಿನ ಮೇಲಿನ ವ್ಯಾಮೋಹ ಮಕ್ಕಳ ಬೆಳವಣಿಗೆಗೆ ತೊಡಕಾಗಬಾರದು. ಮಗುವಿನ ದೈನಂದಿನ ಆಗು ಹೋಗುಗಳನ್ನು ತಿಳಿದುಕೊಳ್ಳಲು ಪೋಷಕರು ಸದಾ ಶಾಲೆಯ ಸಂಪರ್ಕದಲ್ಲಿ ಇರಬೇಕು ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸಂಚಾಲಕ ರವಿನಾರಾಯಣ ಎಂ ಹೇಳಿದರು.

ಅವರು ಶಾಲಾ ಸಭಾಂಗಣದಲ್ಲಿ ನಡೆದ 10ನೇ ತರಗತಿಯ ಪೋಷಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆಡಳಿತ ಮಂಡಳಿ ಅಧ್ಯಕ್ಷ ಡಾ.ಶಿವಪ್ರಕಾಶ್ ಎಂ ಮಾತನಾಡಿ ಪೋಷಕರ ಸಲಹೆ ಸೂಚನೆಗಳನ್ನು ಸದಾ ಪುರಸ್ಕರಿಸಿ, ಅಳವಡಿಸುವ ಭರವಸೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಈವರೆಗಿನ ಸಮಗ್ರ ಅಭಿವೃದ್ಧಿಯಲ್ಲಿ ಪೋಷಕರ, ಶಿಕ್ಷಕರ ಹಾಗೂ ಆಡಳಿತ ಮಂಡಳಿಯ ಶ್ರಮವನ್ನು ಸ್ಮರಿಸಿ ಮುಂದೆಯೂ ಇದೇ ರೀತಿ ಸಹಕಾರವನ್ನು ಕೋರಿದರು. ಸಹಶಿಕ್ಷಕಿ ಸುಜಾತಾ ಪ್ರಾರ್ಥಿಸಿದರು. ಸಹಶಿಕ್ಷಕಿ ಕವಿತಾ ಕುಸುಮಾಧರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here