ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ:ವಿವೇಕಾನಂದ ಆ.ಮಾ ಶಾಲೆಯ ವೇದವೃತ ಭಂಡಾರಿಗೆ ಬೆಳ್ಳಿ ಪದಕ

0

ಪುತ್ತೂರು: 18th  National Pool Life Saving Championship- Rescue India 2023 ಇದರ ಪ್ರಯುಕ್ತ ಬೆಂಗಳೂರಿನಲ್ಲಿ ನಡದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ 10ನೇ ತರಗತಿಯ ವಿದ್ಯಾರ್ಥಿ ವೇದವೃತ ಭಂಡಾರಿ ಚಿಲ್ಮೆತ್ತಾರು (ಚಿಲ್ಮೆತ್ತಾರು ಸಂತೋಷ್ ಭಂಡಾರಿ ಮತ್ತು ಮೀನಾಕ್ಷಿ ಎಸ್.ಭಂಡಾರಿ ದಂಪತಿ ಪುತ್ರ)  4X50ಮೀ ಮಿಡ್ಲೆ ರಿಲೇ  ಹಾಗೂ 4×25ಮೀ ಮನಿಕನ್‌ ಕರ್ರಿ ವಿಭಾಗಗಳಲ್ಲಿ ಸ್ಪರ್ಧಿಸಿ ಎರಡು ಬೆಳ್ಳಿ  ಪದಕಗಳನ್ನು ಪಡೆದುಕೊಂಡಿರುತ್ತಾರೆ. ಬಾಲವನ ಈಜು ಕೊಳದಲ್ಲಿ ಈಜು ತರಬೇತಿಯನ್ನು ರೋಹಿತ್.ಪಿ ಮತ್ತು ದೀಕ್ಷಿತ್ ಅವರಿಂದ ಪಡೆದಿರುತ್ತಾರೆ.  

LEAVE A REPLY

Please enter your comment!
Please enter your name here