ಕಿಡ್ನಿ ವೈಫಲ್ಯ: ನವ ವಿವಾಹಿತ ಮೃತ್ಯು

0

ಪುತ್ತೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಯುವಕನೋರ್ವ ಮೃತಪಟ್ಟ ಘಟನೆ ಕುಂಬ್ರದ ಉರ್ವದಲ್ಲಿ ನಡೆದಿದೆ.
ಉರ್ವ ನಿವಾಸಿ ಸುಂದರ ಎಂಬವರ ಪುತ್ರ ಸುನಿಲ್ ಮೃತ ಯುವಕ. ಕಳೆದ ನಾಲ್ಕು ತಿಂಗಳ ಹಿಂದೆ ಇವರಿಗೆ ವಿವಾಹವಾಗಿತ್ತು. ಹಠಾತ್ತನೆ ಕಿಡ್ನಿ ವೈಫಲ್ಯಗೊಂಡ ಇವರು ಜೂ. 22 ರಂದು ಮೃತಪಟ್ಟಿದ್ದಾರೆ. ಮೃತರು ತಂದೆ , ತಾಯಿ ,ಪತ್ನಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಮೃತರ ಮನೆಗೆ ಪುತ್ತೂರು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಂಬಿ.ವಿಶ್ವನಾಥ್ ರೈ, ಒಳಮೊಗ್ರು ಕಾಂಗ್ರೆಸ್ ವಲಯಾಧ್ಯಕ್ಷ ಅಶೋಕ್ ಪೂಜಾರಿ,ಪಂಚಾಯತ್ ಸದಸ್ಯ ಶೀನಪ್ಪ, ಬೊಳ್ಳಾಡಿ ಮುಹಮ್ಮದ್,ರಕ್ಷಿತ್ ರೈ ಮುಗೇರು,ಆಬೀದ್ ಕಣ್ಣೂರು,ಸಿದ್ದೀಕ್ ಸುಲ್ತಾನ್,ಮಹಾಲಿಂಗ ನಾಯ್ಕ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

LEAVE A REPLY

Please enter your comment!
Please enter your name here