ಕಲ್ಲಾರೆ: ಸ್ಕೂಟರ್ ಕಳವು

0

ಪುತ್ತೂರು: ಸೆಲೂನ್‌ಗೆ ಹೋಗಿ ಹಿಂದಿರುಗುವ ವೇಳೆ ಸ್ಕೂಟರ್ ಕಳವಾದ ಘಟನೆ ಕಲ್ಲಾರೆ ಸೆಲೂನ್ ಅಂಗಡಿಯೊಂದರ ಮುಂದೆ ನಡೆದ ಬಗ್ಗೆ ವರದಿಯಾಗಿದೆ.
ಒಳಮೊಗ್ರು ಗ್ರಾಮದ ಕಟ್ಟಜಾಲು ನಿವಾಸಿ ನಿತಿನ್ ಕುಮಾರ್ ಅವರು ತನ್ನ ಸ್ಕೂಟರ್‌ನ್ನು ಕಲ್ಲಾರೆ ಬಳಿಯ ರಾಘವೇಂದ್ರ ಪೈಂಟ್ ಅಂಗಡಿಯ ಬಳಿಯ ಸೆಲೂನ್ ಮುಂದೆ ಪಾರ್ಕ್ ಮಾಡಿದ್ದರು. ಸೆಲೂನಿಗೆ ಹೋಗಿ ಶೇವಿಂಗ್ ಮಾಡಿಸಿಕೊಂಡು ಹೊರ ಬಂದಾಗ ಅವರ ಸ್ಕೂಟರ್ ಕಳವಾಗಿತ್ತು. ಈ ಕುರಿತು ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here