ಪುತ್ತೂರು: ದರ್ಬೆಯಲ್ಲಿ ಬಾರೊಂದರ ಸಿಬ್ಬಂದಿಗಳ ತಂಡ ಪಕ್ಕದ ಲಾಂಡ್ರಿ ಮಾಲಕ ಹಾಗೂ 53 ವರ್ಷದ ಮಹಿಳೆಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ದರ್ಬೆ ಪ್ರಶಾಂತ್ ಮಹಲ್ನಲ್ಲಿರುವ ವಿ ವಾಶ್ ಲ್ಯಾಂಡ್ರಿ ಮಾಲಕ, ಆರ್ಯಾಪು ಗ್ರಾಮದ ಪಂಜಳ ನಿವಾಸಿ ಹರ್ಷಿತ್ ಕುಮಾರ್ ಪಿ.ವಿ(28ವ.)ರವರು ಮತ್ತು ಅವರ ತಾಯಿ ಹಲ್ಲೆಗೊಳಗಾದವರು. ಬಾರ್ನ ಸಿಬ್ಬಂದಿ ಶಿವ ಯಾನೆ ಶಿವಜಿತ್, ಮಧುಸೂಧನ್, ಮಂಜುನಾಥ್ ಶೆಣೈ, ಸಾತು ಯಾನೆ ಸಾತ್ವಿಕ್ ಪಕಳ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ವಕೀಲರಾದ ಸಂತೋಷ್ ಕುಮಾರ್ ಮತ್ತು ಜಯರಾಮ ರೈ ವಾದಿಸಿದರು.