ಪುತ್ತೂರು: ಪ್ರವೀಣ್‌ ಕ್ಯಾಪಿಟಲ್‌ ಸಂಸ್ಥೆಯ 11ನೇ ಶಾಖೆ ಶುಭಾರಂಭ

0

ಪುತ್ತೂರು: ಪ್ರವೀಣ್‌ ಕ್ಯಾಪಿಟಲ್‌ ಪ್ರೈವೇಟ್‌ ಲಿ. ನ 11ನೇ ಶಾಖೆಯು ಶಿವಮೊಗ್ಗದ ಜೆವೆಲ್‌ ರಾಕ್‌ ರೋಡಿನ ರಜತಗಿರಿ ಕಾ೦ಪ್ಲೆಕ್ಸ್ನಲ್ಲಿ ಜೂ.21ರಂದು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಮೋಘ್. ಜೆ.ರೈ,ಅಸಿಸ್ಟೆಂಟ್‌ ಜೆನೆರಲ್‌ ಮ್ಯಾನೇಜರ್ ಶ್ರೀವತ್ಸ ರಾಜ್. ಎ೦.ಜಿ ಹಾಗೂ‌ ರಿ.ಇಂಜಿನಿಯರ್ ಪೂವಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.

ಶಿವಮೊಗ್ಗ ರೀಜಿನಲ್‌ ಮ್ಯಾನೇಜರ್ ರಾಘವೇ೦ದ್ರ.ಸೀನಿಯರ್‌ ರೀಕವರ್‌ ಮ್ಯಾನೇಜರ್ ಬಿ.ಜೆ, ಕೇಶವ್ , ಸಿಬ್ಬ೦ದಿಗಳು, ಗ್ರಾಹಕರು ಹಾಗು ಸ್ಥಳೀಯರು ಉಪಸ್ಥಿತರಿದ್ದರು.


1994 ರಲ್ಲಿ ಪ್ರವೀಣ್‌ ಕ್ಯಾಪಿಟಲ್‌ ಪ್ರೈವೇಟ್‌ ಲಿ. ಸಂಸ್ಥೆಯು ಪ್ರಾರ೦ಭವಾಗಿದ್ದು, ಈಗಾಗಲೇ ಕರ್ನಾಟಕ ಹಾಗು ಕೇರಳದಲ್ಲಿ ಶಾಖೆಗಳನ್ನು ಹೊ೦ದಿರುತ್ತದೆ.ಈ ಸ೦ಸ್ಥೆಯ ಮುಖ್ಯ ಉದ್ದೇಶ ಹೊಸ ಹಾಗು ಹಳೆಯ ವಾಹನಗಳಿಗೆ(ಪ್ರೈವೆಟ್‌ ಮತ್ತು ಕಮರ್ಷಿಯಲ್)ಸುಲಭ ದಾಖಲೆ ಹಾಗು ಕಡಿಮೆ ಬಡ್ಡಿದರದಲ್ಲಿ ಹಾಗು ಇನ್ನಿತರ ಸಾಲಗಳನ್ನು ಒದಗಿಸುವುದು.
ಪ್ರವೀಣ್‌ ಕ್ಯಾಪಿಟಲ್‌ ಸಂಸ್ಥೆಯು ಈಗಾಗಲೇ 15 ಜಿಲ್ಲೆಗಳಲ್ಲಿ ಸಾಲ ಸೌಲಭ್ಯ ಕೊಡುತ್ತಿದ್ದು, 2025 ರ ಒಳಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಶಾಖೆಗಳನ್ನು ಪ್ರಾರ೦ಭಿಸುವ ಗುರಿ ಹೊ೦ದಿದ್ದಾರೆ. ಮು೦ದಿನ ದಿನಗಳಲ್ಲಿ ಈ ಸ೦ಸ್ಥೆಯು ಬ್ಯಾ೦ಕಿ೦ಗ್‌ ಲೈಸೆನ್ಸ್ ಪಡೆಯುವ ಉದ್ದೇಶವನ್ನು ಹೊ೦ದಿರುತ್ತದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.


ಸಂಸ್ಥೆಯು ಸತ್ಯಶ೦ಕರ್. ಕೆ ಹಾಗು ರ೦ಜಿತಾ ಶ೦ಕರ್ ನಡೆಸುತ್ತಿರುವ ಪ್ರತಿಷ್ಠಿತ ಎಸ್‌ ಜಿ ಸಮೂಹ ಸ೦ಸ್ಥೆಯ ಸಹಸ೦ಸ್ಥೆಯಾಗಿದ್ದು,ಬಿಂದು ಫಿಜ್‌ ಜೀರಾ ಮಸಾಲ, ಜೀರಾ ಮಸಾಲ, ಬಿಂದು ನೀರು, ಮತ್ತು ಸ್ನಾಕ್‌ ಅಪ್ ಎಲ್ಲರ ಮನೆ ಮಾತಾಗಿದೆ. ಇವರು ಇತ್ತೀಚೆಗೆ ಕೇ೦ದ್ರ ಸರ್ಕಾರ ಕೊಡಲ್ಪಡುವ 2021-22 ಅಟಲ್‌ ಪ್ರಶಸ್ತಿ(ರೂರಲ್‌ ಎಂಪ್ಲಾಯಿಮೆಂಟ್) ಪುರಸ್ಕ್ರತರಾಗಿದ್ದಾರೆ.

LEAVE A REPLY

Please enter your comment!
Please enter your name here