ತೂಂಬಡ್ಕ ‘ಕೆಸರ್‌ಡ್ ಒಂಜಿ ದಿನ’ ಆಮಂತ್ರಣ ಬಿಡುಗಡೆ

0

ಪಾಣಾಜೆ: ಪಾಣಾಜೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ತುಳುನಾಡ್ ಫ್ರೆಂಡ್ಸ್ ತೂಂಬಡ್ಕ ಸಾರಥ್ಯದಲ್ಲಿ ನಡೆಯುವ ‘ಕೆಸರ್ ಡ್ ಒಂಜಿ ದಿನ’ ಕ್ರೀಡಾಕೂಟದ ಆಮಂತ್ರಣ ಪತ್ರಿಕೆಯನ್ನು ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ತುಳುನಾಡು ಫ್ರೆಂಡ್ಸ್ ತೂಂಬಡ್ಕ ಇದರ ಅಧ್ಯಕ್ಷ ಸುರೇಶ್ ನಾಯ್ಕ್ ತೂಂಬಡ್ಕ, ಕಾರ್ಯದರ್ಶಿ ವಿನೋದ್ ರಾಜ್ ತೂಂಬಡ್ಕ, ಕೋಶಾಧಿಕಾರಿ ದಯಾನಂದ ತೂಂಬಡ್ಕ, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here