ಪುತ್ತೂರು: ರಕ್ತದಾನ ಶ್ರೇಷ್ಠ ದಾನ ಎಂಬ ಪರಿಕಲ್ಪನೆಯಡಿ ತನ್ನ 62ರ ವಯಸ್ಸಿನಲ್ಲಿ ರಕ್ತದಾನವನ್ನು ಮಾಡುತ್ತಿರುವ ಉಪ್ಪಿನಂಗಡಿಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಂದನಾ ಶರತ್. ಉಪ್ಪಿನಂಗಡಿಯ ಒಡಿಯೂರು ಶ್ರೀ ಗುರುದೇವ ಬಳಗದ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ಬಂದು ರಕ್ತದಾನವನ್ನು ಮಾಡುವ ಮೂಲಕ ತನ್ನ ರಕ್ತದಾನದ ಬದ್ದತೆಯನ್ನು ಪ್ರಕಟೀಕರಿಸಿದರು.