ಸವಣೂರಿನಲ್ಲಿ ಪ್ರತಿದಿನ 4 ದಿನಪತ್ರಿಕೆಗಳನ್ನು ಉಚಿತವಾಗಿ ಓದಲು ಓದುಗರಿಗೆ ನೀಡುವ ಪ್ರಭು ಸಹೋದರರು

0

ಪುತ್ತೂರು: ಕಡಬ ತಾಲ್ಲೂಕಿನ ಸವಣೂರು ಅಭಿವೃದ್ಧಿ ಹೊಂದುತ್ತಿರುವ ಊರು. ಇಲ್ಲಿ ಕಳೆದ 40 ವರ್ಷಗಳಿಂದ ಹೋಟೆಲ್ ಉದ್ಯಮ (ಚಂದ್ರ ಭವನ) ನಡೆಸಿಕೊಂಡು ಬರುತ್ತಿರುವ ಇರ್ವರರು ಸಹೋದರರು ತಮ್ಮ ಹೋಟೆಲ್‌ ಬಳಿ ಹಲವು ವರುಷಗಳಿಂದ ಸಣ್ಣದಾದ ಲೈಬ್ರರಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಲೈಬ್ರರಿಯಲ್ಲಿ ಪ್ರತಿ ದಿನ 4 ದಿನಪತ್ರಿಕೆಗಳನ್ನು ಓದಬಹುದು. ಜೊತೆಗೆ ಹಲವು ವಾರ, ಮಾಸ ಪತ್ರಿಕೆ ಸಹಿತ ಉಪಯುಕ್ತ ಪುಸ್ತಕ ಇದೆ. ಪ್ರಭು ಸಹೋದರರಾದ ಸುಧಾಕರ ಪ್ರಭು ಮತ್ತು ರಾಮಕೃಷ್ಣ ಪ್ರಭು(ಕಿಟ್ಟಣ್ಣ) ಅವರು ಸವಣೂರು ಭಾಗದಲ್ಲಿ ಎಲ್ಲರಿಗೂ ಅಚ್ಚು ಮೆಚ್ಚು. ಸವಣೂರು ಹೋಟೆಲ್‌ ಚಂದ್ರ ಭವನದಲ್ಲಿ ಎಲ್ಲಾ ರೀತಿಯ ಜನಪಯೋಗಿ ಮಾಹಿತಿಯನ್ನು ಉಚಿತವಾಗಿ ಪಡೆಯಬಹುದು. ಹಾಗಾದರೆ ಇನ್ನೂ ಪ್ರತಿ ನಿತ್ಯ 10 ನಿಮಿಷವಾದರೂ ಚಂದ್ರ ಭವನಕ್ಕೆ ತೆರಳಿ 4 ದಿನಪತ್ರಿಕೆಗಳನ್ನು ತಪ್ಪದೇ ಓದಿ.

LEAVE A REPLY

Please enter your comment!
Please enter your name here