ಕಾಣಿಯೂರು: ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸುವಿಧಾ ಕೇಂದ್ರ ಉದ್ಘಾಟನೆ

0

ಕಾಣಿಯೂರು: ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ ಟ್ರಸ್ಟ್ ಇದರ ವತಿಯಿಂದ ಸುವಿಧಾ ಕೇಂದ್ರವು ಕಾಣಿಯೂರಿನ ರಾಶಿ ಕಾಂಪ್ಲೆಕ್ಷ್ ನಲ್ಲಿ ಜು 5ರಂದು ನೂತನವಾಗಿ ಉದ್ಘಾಟನೆಗೊಂಡಿತ್ತು. ಕಾಣಿಯೂರು ರಾಶಿ ಕಾಂಪ್ಲೆಕ್ಸ್ ಮಾಲಕರು, ಉದ್ಯಮಿ ಚಂದ್ರಶೇಖರ ಬರೆಪ್ಪಾಡಿಯವರು ಉದ್ಘಾಟಿಸಿ ಶುಭಹಾರೈಸಿದರು.


ಶ್ರೀ ಕ್ಷೇ. ಧ. ಯೋಜನೆಯ ಕಾಣಿಯೂರು ಒಕ್ಕೂಟದ ಅಧ್ಯಕ್ಷ ಕುಸುಮಧರ ಅನಿಲ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇ. ಧ. ಯೋಜನೆಯ ಬೆಳಂದೂರು ಒಕ್ಕೂಟ ದ ಅಧ್ಯಕ್ಷ ಶೇಷಪ್ಪ ಅಬೀರ, ನಿಕಟಪೂರ್ವ ವಲಯಾಧ್ಯಕ್ಷ ವೇಣುಗೋಪಾಲ ಕಳುವಾಜೆ, ವಲಯ ಮೇಲ್ವಿಚಾರಕರು ಹರ್ಷ ಕುಮಾರಿ ಉಪಸ್ಥಿತರಿದ್ದರು. ಗ್ರಾ. ಪಂ ಸದಸ್ಯ ರಾಮಣ್ಣ ಗೌಡ ಮುಗರಂಜ ಸ್ವಾಗತಿಸಿ, ಮಮತಾ ಅಬೀರ ವಂದಿಸಿದರು.ಕಾಣಿಯೂರು ಸೇವಾಪ್ರತಿನಿಧಿ ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here