ಸುಬ್ರಹ್ಮಣ್ಯ: ಕಾರು, ಬೈಕ್ ಡಿಕ್ಕಿ- ಹೆಡ್‌ಕಾನ್ಸ್‌ಸ್ಟೇಬಲ್‌ಗೆ ಗಾಯ

0

ಕಡಬ: ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರ ಮರ್ದಾಳ ಗ್ರಾಮದ ದೋಲ ನಿವಾಸಿ, ಸುಬ್ರಹ್ಮಣ್ಯ ಠಾಣೆಯಲ್ಲಿ ಹೆಡ್‌ಕಾನ್ಸ್‌ಸ್ಟೆಬಲ್ ಆಗಿರುವ ನಿತೇಶ್ ವಿ.ಶೆಟ್ಟಿ(43ವ.)ಎಂಬವರು ಗಾಯಗೊಂಡಿರುವ ಘಟನೆ ಜು.4ರಂದು ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಸುಬ್ರಹ್ಮಣ್ಯ ಠಾಣೆಯಲ್ಲಿ ಹೆಡ್‌ಕಾನ್ಸ್‌ಸ್ಟೇಬಲ್ ಆಗಿರುವ ನಿತೇಶ್ ಶೆಟ್ಟಿಯವರು ಜು.4ರಂದು ಬೆಳಿಗ್ಗೆ ರೌಂಡ್ಸ್ ನಿಮಿತ್ತ ತನ್ನ ಬೈಕ್ (ಕೆಎ19 ಇಎ9623)ನಲ್ಲಿ ಠಾಣೆಯಿಂದ ಹೊರಟು ಸುಬ್ರಹ್ಮಣ್ಯ ದೇವಸ್ಥಾನ, ಇಂಜಾಡಿ, ಆದಿ ಸುಬ್ರಹ್ಮಣ್ಯ ಕಡೆಗಳಲ್ಲಿ ರೌಂಡ್ಸ್ ಮಾಡಿಕೊಂಡು ಕುಮಾರಧಾರ ಕಡೆಗೆ ಹೋಗುತ್ತಿರುವಾಗ ದ್ವಿಪಥ ರಸ್ತೆಯಲ್ಲಿ ಎಡಗಡೆಯಿಂದಾಗಿ ಚಲಾಯಿಸುತ್ತಿರುವಾಗ ಬಲ ಬದಿಯಿಂದ ಬಂದ ಕಾರು(ಕೆಎ20 ಪಿ3028) ಡಿಕ್ಕಿಯಾಗಿದೆ. ಕಾರು ಚಾಲಕ ನಾಣಯ್ಯ ಎಂಬವರು ಅಜಾಗರೂಕತೆ ಹಾಗೂ ನಿರ್ಲಕ್ಷತೆಯಿಂದ ಏಕಾಏಕಿ ಯಾವುದೇ ಸೂಚನೆಯನ್ನು ನೀಡದೇ ಒಮ್ಮೆಲೆ ಎಡಗಡೆಗೆ ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದಿರುವುದಾಗಿದೆ. ಘಟನೆಯಲ್ಲಿ ಬೈಕ್ ಸಮೇತ ರಸ್ತೆಗೆ ಬಿದ್ದ ನಿತೇಶ್ ಶೆಟ್ಟಿಯವರನ್ನು ಅಲ್ಲೇ ಪಕ್ಕದ ತರಕಾರಿ ಅಂಗಡಿಯವರಾದ ಲಕ್ಷೀಶ ಭಟ್, ಹೆಚ್.ಎಲ್. ವೆಂಕಟೇಶ್ ಮತ್ತು ಇತರರು ಬಂದು ಉಪಚರಿಸಿ ಅಲ್ಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ಅವರು ಪುತ್ತೂರು ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here