ಈಶ್ವರಮಂಗಳ ವೈಟ್ ಹೌಸ್‌ನಲ್ಲಿ ಶಾಪಿಂಗ್ ಫೆಸ್ಟಿವಲ್‌ಗೆ ಗ್ರಾಹಕರಿಂದ ಉತ್ತಮ ಸ್ಪಂದನೆ-ಡ್ರಾ ವಿಜೇತರಿಗೆ ಬಹುಮಾನ ವಿತರಣೆ

0

ಪುತ್ತೂರು: ಈಶ್ವರಮಂಗಲದಲ್ಲಿ ಕಾರ್ಯಾಚರಿಸುತ್ತಿರುವ ವೈಟ್ ಹೌಸ್ ಮಳಿಗೆಯು ಉದ್ಘಾಟನೆ ಪ್ರಯುಕ್ತ ಹಮ್ಮಿಕೊಂಡ ಶಾಪಿಂಗ್ ಫೆಸ್ಟಿವಲ್‌ಗೆ ಗ್ರಾಹಕರಿಂದ ಭರ್ಜರಿ ಸ್ಪಂದನೆ ದೊರಕಿದ್ದು, ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಯಿತು.


ನಬೀಲ್ ದೇಲಂಪಾಡಿ ಪ್ರಥಮ, ತಹ್ಲೀಲ್ ಮಾಡನ್ನೂರು ದ್ವಿತೀಯ ಹಾಗೂ ಶಾಹಿದ್ ಸಿ ಎಚ್ ಕಾವು ತೃತೀಯ ಸ್ಥಾನವನ್ನು ಪಡೆದುಕೊಂಡರು. ಅದೇ ರೀತಿ ಸೀಸನ್ ವಿನ್ನರ್‌ಗಳಾಗಿ ರೇಖಾ ಸುರಳಿಮೂಲೆ, ಮತ್ತು ಜಗದೀಶ್ ದೇಲಂಪಾಡಿ ಆಯ್ಕೆಗೊಂಡರು. ವಿಜೇತರಿಗೆ ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಹಿರಾ ಟವರ್ ಮಾಲಕ ಅಬ್ದುಲ್ ಖಾದರ್ ಹಾಜಿ, ನೆ.ಮುಡ್ನೂರು ಗ್ರಾ.ಪಂ ಸದಸ್ಯ ರಾಮ ಮೇನಾಲ, ಮೇನಾಲ ಮಧುರ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಮೊದಲಾದವರು ಬಹುಮಾನ ವಿತರಿಸಿ ಅಭಿನಂದಿಸಿದರು.
ಮುಹಮ್ಮದ್ ಮುಗುಳಿ, ಇಬ್ರಾಹಿಂ ಪಟ್ಲಡ್ಕ, ಶರೀಫ್ ಅರ್ಶದಿ ಈಶ್ವರಮಂಗಲ, ಸಂಜೀವ ಈಶ್ವರಮಂಗಲ, ಹಂಝ ಹಾಜಿ ಕುಶಾಲನಗರ, ಅಬ್ದುಲ್ಲಾ ಕೂರ್ಗ್, ಅಬ್ದುಲ್ ಸಲಾಂ ತಂಙಳ್, ಅಬೂಬಕ್ಕರ್ ಬಪ್ಪಳಿಗೆ, ಅಬ್ದುಲ್ ಖಾದರ್ ಜನತಾ, ವೈಟ್ ಹೌಸ್ ಬಿಸಿನೆಸ್ ಹಾಗೂ ಮಾರ್ಕೆಟಿಂಗ್ ಸೆಲ್ ವ್ಯವಸ್ಥಾಪಕರು, ಸಿಬ್ಬಂದಿಗಳು ಭಾಗವಹಿಸಿದ್ದರು. ಕೆ.ಯು ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here