ಕಾರೆಕ್ಕಾಡು ಧರೆ ಕುಸಿತದಿಂದ ಮನೆಗೆ ಹಾನಿ

0

ಪುತ್ತೂರು: ನೆಹರುನಗರ ಕಲ್ಲೇಗ ಕಾರೆಕ್ಕಾಡು ಕಾಲೋನಿಯಲ್ಲಿ ಧರೆಕುಸಿದು ಎರಡು ಮನೆಗಳಿಗೆ ಹಾನಿಯಾದ ಘಟನೆ ಜು.7ರಂದು ನಡೆದಿದೆ. ಸ್ಥಳಕ್ಕೆ ಬ್ಲಾಕ್ ಕಾಂಗ್ರೆಸ್ ಮುಖಂಡ ಕೃಷ್ಣಪ್ರಸಾದ್ ಆಳ್ವ ನೇತೃತ್ವದಲ್ಲಿ ಮುಖಂಡರು ಭೇಟಿ ನೀಡಿದ್ದಾರೆ.


ನೆಹರುನಗರ ಕಲ್ಲೇಗ ಕಾರೆಕ್ಕಾಡು ರುಕ್ಮ ಮತ್ತು ಬೇಬಿ ಎಂಬವರ ಮನೆಯ ಬಳಿ ಧರೆಕುಸಿತಗೊಂಡು ಮನೆಗೆ ಹಾನಿಯಾಗಿದೆ. ಸ್ಥಳಕ್ಕೆ ಬ್ಲಾಕ್ ಕಾಂಗ್ರೆಸ್‌ನ ಮುಖಂಡ ಕೃಷ್ಣಪ್ರಸಾದ್ ಆಳ್ವ ಸಹಿತ ಪ್ರಮುಖರಾದ ರೋಶನ್ ರೈ ಬನ್ನೂರು, ಪ್ರಹ್ಲಾದ್, ರಂಜಿತ್, ರಶೀದ್, ಕಾರ್ತಿಕ್ ಜಯಂತ್ ಕಲ್ಲೇಗ ಮತ್ತಿತರರು ಭೇಟಿ ನೀಡಿ ನಗರಸಭೆಗೆ ಮಾಹಿತಿ ನೀಡಿದ್ದಾರೆ.

ನಗರಭೆಯಿಂದ ಪೌರಾಯುಕ್ತ ಮಧು ಎಸ್ ಮನೋಹರ್, ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಗರಸಭೆ ಸದಸ್ಯ ಕೆ.ಜೀವಂಧರ್ ಜೈನ್ ಅವರು ಆರಂಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ನಗರಸಭೆಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here