ದೋಳ್ಪಾಡಿ: ಶ್ರೀ.ಕ್ಷೇ.ಧ.ಗ್ರಾ.ಯೋಜನೆಯಿಂದ ಸಹಾಯಧನ ಚೆಕ್ ಹಸ್ತಾಂತರ

0

ಕಾಣಿಯೂರು:: ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಕಡಬ ತಾಲೂಕು ವ್ಯಾಪ್ತಿಯ ದೋಳ್ಪಾಡಿ ಕಾರ್ಯಕ್ಷೇತ್ರದ ಜ್ಞಾನಗಂಗಾ ಸ್ವ-ಸಹಾಯ ಸಂಘದ ಸದಸ್ಯೆ ದೇವಕಿ ಆಚಾರ್ಯ ಎಂಬವರು ಸುಮಾರು 8 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಇವರಿಗೆ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯಿಂದ ಮಂಜೂರುಗೊಂಡ ರೂ 30,000 ಸಹಾಯಧನದ ಚೆಕ್ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕೆ, ಕಾಣಿಯೂರು ಗ್ರಾ.ಪಂ.ಸದಸ್ಯರಾದ ಲೋಖಯ್ಯ ಪರವ ದೋಳ್ಪಾಡಿ, ಅಂಬಾಕ್ಷಿ ಕೂರೇಲು, ಸ್ಥಳೀಯರಾದ ಮಾರಪ್ಪ ಶೆಟ್ಟಿ ದೋಳ್ಪಾಡಿ, ರಘುರಾಮ ರೈ ಪಿಜಕ್ಕಳ, ರಾಮಯ್ಯ ಗೌಡ, ದಿವ್ಯಾ ಅಕ್ಕಾಜೆ, ಮೋಹಿನಿ, ವಲಯ ಮೇಲ್ವೀಚಾರಕಿ ಹರ್ಷಕುಮಾರಿ, ಸೇವಾಪ್ರತಿನಿಧಿ ಪ್ರತಿಮಾ ರೈ ಪಿಜಕ್ಕಳ, ಸೇವಾ ಸಿಂಧು ಕೇಂದ್ರದ ಮೋಹಿನಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here