ಮಾರುತಿ ಕಾರುಗಳ ಉಚಿತ ತಪಾಸಣಾ ಶಿಬಿರಕ್ಕೆ ಸರತಿಯಲ್ಲಿ ನಿಂತ ನೂರಾರು ಕಾರುಗಳು…!!!

0

ಆರಂಭದಲ್ಲೇ ಬುಕ್ಕಿಂಗ್ ಪಡೆದ ಮೂರು ಕಾರುಗಳು…!
ಉಭಯ ಜಿಲ್ಲೆಯ ಪ್ರಮುಖ ಡೀಲರ್ ಭಾರತ್ ಆಯೋಜನೆಗೆ ಕಾರು ಪ್ರಿಯರು ಫುಲ್ ಖುಷ್…

ಪುತ್ತೂರು : ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿಗಳಲ್ಲಿ ಅದ್ವಿತೀಯ ಸ್ಥಾನ ಪಡೆದುಕೊಂಡಿರುವ , ಅದೇ ರೀತಿ ಮಾರುಕಟ್ಟೆಯಲ್ಲೂ ಛಾಪು ಮೂಡಿಸಿರುವಂತಹ ಹೆಸರಾಂತ ಮಾರುತಿ ಸುಝುಕಿಯೂ ದ.ಕ ಹಾಗೂ ಉ.ಕ. ಜಿಲ್ಲೆಯ ಪ್ರಮುಖ ಡೀಲರ್ ಸಂಸ್ಥೆ ,ಕಳೆದ 17 ವರುಷಗಳಿಂದ ಉಭಯ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳಿಗೆಯನ್ನು ಹೊಂದಿ , ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ಹೊರಹೊಮ್ಮಿರುವ ಭಾರತ್ ಅಟೋಕಾರ್ಸ್ ಸಹಭಾಗಿತ್ವದಲ್ಲಿ ಗ್ರಾಹಕರಿಗಾಗಿ ಜು.8 ಹಾಗು ಜು. 9 ಈ ಎರಡು ದಿನಗಳ ಬೃಹತ್ ಮೆಗಾ ಮಾನ್ಸೂನ್ ಉಚಿತ ತಪಾಸಣೆ ಶಿಬಿರವನ್ನು ಬೆಳಗ್ಗೆ 9 ರಿಂದ 5 ಗಂಟೆವರೆಗೆ ತನ್ನ ಎಲ್ಲಾ ವಿಸ್ತರಣಾ ಮಳಿಗೆಗಳಲ್ಲೂ ಆಯೋಜನೆ ಮಾಡಲಾಗಿದೆ.

ಜು.8 ರ ಬೆಳಗಿನಿಂದಲ್ಲೇ ನೂರಾರೂ ಗ್ರಾಹಕರು ಹಾರಾಡಿ ಬಳಿಯ ಮಳಿಗೆಗೆ ಆಗಮಿಸಿ , ಕಾರುಗಳ ಉಚಿತ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು , ಸಂಪೂರ್ಣ ಲಾಭ ಪಡೆಯುವಲ್ಲಿ ಯಶಸ್ವಿಯಾದರು. ಇದೇ ವೇಳೆ ಮೂರು ವಿನೂತನ ಕಾರುಗಳ ನೋಂದಾವಣೆ ನಡೆಯಿತು. ಅತ್ಯುತ್ತಮ ಬೆಂಬಲವೂ ದೊರೆಯಿತು.

ಶಿಬಿರದಲ್ಲಿ ವಾಹನಗಳ ಉಚಿತ ಕನ್ಸ್ಯುಮೇಬಲ್ ಟಾಪ್ ಆಪ್ ಮತ್ತು ಸಾಮಾನ್ಯ ತಪಾಸಣೆ, ಲೇಬರ್ ಮತ್ತು ಬಿಡಿ ಭಾಗಗಳ ಮೇಲೆ ರಿಯಾಯಿತಿ, ಉಚಿತ ಮೌಲ್ಯ ಮಾಪನ, ಕಾರ್ ಕೇರ್ ಟ್ರೀಟ್‌ಮೆಂಟ್‌ಗಳ ಮೇಲೆ ವಿಶೇಷ ಕೊಡುಗೆ, ಲಕ್ಕಿ ಡ್ರಾ, ಉಚಿತ ಕೊಡುಗೆಗಳು ಕೂಡಾ ಲಭ್ಯವಿದ್ದು , ಹೊಸ ವಾಹನಗಳ ಬುಕ್ಕಿಂಗ್ ಮೇಲೆ ಹೆಚ್ಚುವರಿ ರಿಯಾಯಿತಿ ಕೂಡಾ ಪ್ರಕಟಿಸಿದ್ದು , ಆಸಕ್ತರು ಈ ಶಿಬಿರದ ಲಾಭ ಪಡೆಯುವಂತೆ ಸಂಸ್ಥೆಯ ಮ್ಯಾನೇಜರ್ (ವರ್ಕ್ ಶಾಪ್) ಆನಂದ್ ಮೂಲ್ಯ ವಿನಂತಿಸಿದರು. ಈ ವೇಳೆ ಭಾರತ್ ಅಟೋಕಾರ್ಸ್ ಗ್ರಾಹಕರು , ಟೀಂ ಲೀಡರ್ ಸಂತೋಷ್ ಹಾಗೂ ಜಯರಾಜ್ , ಪ್ರತಿನಿಧಿಗಳು , ಕಛೇರಿ ಸಿಬ್ಬಂದಿಗಳು ಮತ್ತು ವಿವಿಧ ಸಂಸ್ಥೆಯ ಫೈನಾನ್ಸ್ ಪ್ರತಿನಿಧಿಗಳು ಉಪಸ್ಥಿತರಿದ್ದರು.

  • ಜನರಲ್ ಚೆಕ್ ಅಪ್ ,ಕನ್ಸುಮೇಬಲ್ಸ್ ಟಾಪ್ ಅಪ್ , ವ್ಯಾಲ್ಯೂವೇಶನ್ ಸೇವೆಗಳು ಉಚಿತ.
  • ಲೇಬರ್ ಹಾಗೂ ಬಿಡಿಭಾಗಗಳ ಮೇಲೂ ರಿಯಾಯಿತಿ.
  • ಲಕ್ಕಿ ಡ್ರಾ ,ಉಚಿತ ಕೊಡುಗೆಗಳು , ಬುಕ್ಕಿಂಗ್ ಗೆ ಸ್ಪೆಷಲ್ ಆಫರ್.
  • ಮಾಹಿತಿಗಾಗಿ :9886072730( ಪುತ್ತೂರು, ನೆಲ್ಯಾಡಿ)

LEAVE A REPLY

Please enter your comment!
Please enter your name here