ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಪಾಣಾಜೆ ವಲಯದ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಪಾಣಾಜೆ ವಲಯದ ಮಹಾಸಭೆಯು ಬೆಟ್ಟಂಪಾಡಿ ಶಿವನಂದಿನಿ ಹಾಲಿನ ಡೈರಿಯ ಸಭಾಭವನದಲ್ಲಿ ಸುರೇಖ ನಿಡ್ಪಳ್ಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಜಯಂತ್ ಉರ್ಲಾಂಡಿ ಹಾಗೂ ಪುತ್ತೂರು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಜಯರಾಮ್.ಬಿ.ಎನ್, ಪ್ರಧಾನ ಕಾರ್ಯದರ್ಶಿ ಉಮಾನಾಯಕ್, ಕೋಶಾಧಿಕಾರಿ ಸುಜಾತ ಮಂದಾರ ರವರು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶಶಿಕಲಾ, ಕಾರ್ಯದರ್ಶಿಯಾಗಿ ವಿದ್ಯಾ, ಕೋಶಾಧಿಕಾರಿಯಾಗಿ ವಿದ್ಯಾಲಕ್ಷ್ಮಿ ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಕೇಸರಿ, ಜತೆ ಕಾರ್ಯದರ್ಶಿಯಾಗಿ ಸುಜಾತಾ ರೈ, ಉಪ ಸಮಿತಿ ಸದಸ್ಯರಾಗಿ ಶೇಷನ್, ಸುರೇಖಾ, ರಮಣಿ, ಲಲಿತ, ಪುಷ್ಪವತಿ, ಗೀತಾ, ಸುಜಾತ, ನಮಿತ, ವಿಶಾಲಾಕ್ಷಿ ಆಯ್ಕೆಯಾದರು.

LEAVE A REPLY

Please enter your comment!
Please enter your name here