ಎಸ್‌ಸಿಡಿಸಿಸಿ ಬ್ಯಾಂಕ್ ಸವಣೂರು ಶಾಖಾ ವ್ಯವಸ್ಥಾಪಕ ವಿಶ್ವನಾಥ್,ಸಹಾಯಕ ವ್ಯವಸ್ಥಾಪಕಿ ಮಲ್ಲಿಕಾರವರಿಗೆ ಬೀಳ್ಕೋಡುಗೆ

0

ಪುತ್ತೂರು: ಕಳೆದ 5 ವರ್ಷಗಳಿಂದ ಎಸ್‌ಸಿಡಿಸಿಸಿ ಬ್ಯಾಂಕ್ ಸವಣೂರು ಶಾಖಾ ವ್ಯವಸ್ಥಾಪಕರಾಗಿದ್ದ ವಿಶ್ವನಾಥ್‌ರವರಿಗೆ ಕುಂಬ್ರ ಶಾಖೆಗೆ ಹಾಗೂ
ಸವಣೂರು ಶಾಖೆಯ ಸಹಾಯಕ ವ್ಯವಸ್ಥಾಪಕಿ ಮಲ್ಲಿಕಾರವರಿಗೆ ಅಲಂಕಾರು ಶಾಖೆಗೆ ವರ್ಗವಣೆಗೊಂಡ ಹಿನ್ನಲೆಯಲ್ಲಿ ಬೀಳ್ಕೋಡುಗೆ ಸಮಾರಂಭವನ್ನು ಎಸ್‌ಸಿಡಿಸಿಸಿ ಸವಣೂರು ಬ್ಯಾಂಕ್ ಶಾಖೆಯಲ್ಲಿ ಜರಗಿತು. ವಿಶ್ವನಾಥ್ ಮತ್ತು ಮಲ್ಲಿಕಾರವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಜನಸ್ನೇಹಿ ಅಧಿಕಾರಿ- ಚಂದ್ರಶೇಖರ್
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಮಾತನಾಡಿ ವಿಶ್ವನಾಥ್‌ರವರು ಎಸ್‌ಸಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಒರ್ವ ಜನಸ್ನೇಹಿ ಅಧಿಕಾರಿಯಾಗಿ ಎಲ್ಲಾ ಗ್ರಾಹಕರಿಂದಲೂ ಪ್ರೀತಿಗೆ ಪಾತ್ರರಾಗಿದ್ದರು. ಇವರ ಅವಧಿಯಲ್ಲಿ ಸಾಲ ನೀಡುವಿಕೆ ಮತ್ತು ಠೇವಣಿ ಸಂಗ್ರಹದಲ್ಲೂ ಉತ್ತಮ ಪ್ರಗತಿಯನ್ನು ಸಾಧಿಸಿ ತೋರಿಸಿದ್ದಾರೆ. ಮಲ್ಲಿಕಾರವರು ಕೂಡ ಉತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಶಂಶೆ ವ್ಯಕ್ತಪಡಿಸಿದರು.


ದಕ್ಷತೆಯ ನೆಲೆಯಲ್ಲಿ ಕರ್ತವ್ಯ- ಅಶೋಕ ಗೌಡ
ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಅಶೋಕ ಗೌಡ ಪಿ ಮಾತನಾಡಿ ವಿಶ್ವನಾಥ್ ಮತ್ತು ಮಲ್ಲಿಕಾ ಎಸ್‌ಸಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ದಕ್ಷತೆಯ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿದ ವಿಶ್ವನಾಥ್‌ರವರು ಮಾತನಾಡಿ ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಮಲ್ಲಿಕಾರವರು ಸಂದರ್ಬೋಚಿತವಾಗಿ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಮಧುಕರ ಎಚ್, ಎಸ್‌ಸಿಡಿಸಿಸಿ ಬ್ಯಾಂಕ್ ಉಪ ವ್ಯವಸ್ಥಾಪಕ ದಿನೇಶ್, ಸಿಬ್ಬಂಧಿ ಶೋಭಾ ಬಿ. ರೈ ಕೆರೆಕೋಡಿ, ನಿತ್ಯನಿಧಿ ಸಂಗ್ರಹಕ ಬಾಲಚಂದ್ರ ರೈ ಕೆರೆಕೋಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here