ಹಿಂದಿ ಉಪನ್ಯಾಸಕಿ ಲತಾರವರಿಗೆ ಡಾಕ್ಟರೇಟ್ ಪದವಿ

0

ಪುತ್ತೂರು: ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕರಾಗಿರುವ ಲತಾ ಬಿ.ಅವರು ಮಂಡಿಸಿದ ರಾಜೇಶ್ ಜೋಶಿ ಕೆ ಕಾವ್ಯೋನ್ ಮೈನ್ ಸಾಮಾಜಿಕ್‌ಯತರ್ಥ್ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿ.ಎಚ್.ಡಿ.ಪದವಿ ನೀಡಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಹಿಂದಿ ವಿಭಾಗದ ಸಂಯೋಜಕಿ ಡಾ|ನಾಗರತ್ನ ಎನ್.ರಾವ್‌ರವರ ಮಾರ್ಗದರ್ಶನದಲ್ಲಿ ಇವರು ಈ ಪ್ರಬಂಧ ಮಂಡಿಸಿದ್ದರು. ಈ ಹಿಂದೆ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಹಾಗೂ ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದ ಇವರು ನಿವೃತ್ತ ಸೇನಾಧಿಕಾರಿ ಧರ್ನಪ್ಪ ಪೂಜಾರಿ ಹಾಗೂ ಉಮಾವತಿ ಇವರ ಪುತ್ರಿ.

LEAVE A REPLY

Please enter your comment!
Please enter your name here