ಬಪ್ಪಳಿಗೆಯಲ್ಲಿ ಅಪಾಯದ ಮರಗಳ ಗೆಲ್ಲು ತೆರವು ಕಾರ್ಯಾಚರಣೆ – ಕ್ರೇನ್ ಬಕೇಟ್ ಕಡಿದು ಇಬ್ಬರಿಗೆ ಗಾಯ

0

ಪುತ್ತೂರು: ಬಪ್ಪಳಿಗೆಯಲ್ಲಿ ರಸ್ತೆ ಬದಿಯ ಅಪಾಯದ ಮರಗಳ ಗೆಲ್ಲುಗಳ ತೆರವು ಕಾರ್ಯಾಚರಣೆ ವೇಳೆ ಕ್ರೇನ್ ಬಕೇಟ್ ಕಡಿದು ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಜು.15 ರಂದು ನಡೆದಿದೆ.


ರಸ್ತೆ ಬದಿಯ ಅಪಾಯದ ಮರಗಳ ಗೆಲ್ಲುಗಳ ತೆರವು ಕಾರ್ಯಾಚರಣೆಯು ಬಪ್ಪಳಿಗೆ ಗೆಳೆಯರ ಬಳಗ ಮತ್ತು ಮೆಸ್ಕಾಂ ಜೊತೆ ಜಂಟಿ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಕ್ರೇನ್ ಬಕೇಟ್ ಕಡಿದ ಪರಿಣಾಮ ಕ್ರೇನ್ ಬಕೇಟ್ ಸಮೇತ ಕಾರ್ಮಿಕರಿಬ್ಬರು ನೆಲಕ್ಕೆ ಅಪ್ಪಳಿಸಿದ ಪರಿಣಾಮ ಇಬ್ಬರು ಕಾರ್ಮಿಕರಿಗೆ ಗಾಯವಾಗಿದೆ. ಗಾಯಾಳುಗಳು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

LEAVE A REPLY

Please enter your comment!
Please enter your name here