ಕೊಕ್ಕಡ ಜೆಸಿಐಗೆ ವಲಯ ಉಪಾಧ್ಯಕ್ಷರ ಭೇಟಿ

0

ನೆಲ್ಯಾಡಿ: ಕೊಕ್ಕಡ ಕಪಿಲಾ ಜೇಸಿಗೆ ಜೆಸಿಐ ವಲಯ 15 ಪ್ರಾಂತ್ಯ ಸಿ. ಇದರ ಉಪಾಧ್ಯಕ್ಷ ಭರತ್ ಶೆಟ್ಟಿಯವರ ಅಧಿಕೃತ ಭೇಟಿ ಕಾರ್ಯಕ್ರಮ ಜು.16ರಂದು ನಡೆಯಿತು.


ವಲಯ ಉಪಾಧ್ಯಕ್ಷ ಭರತ್ ಶೆಟ್ಟಿಯವರು ಎಲ್.ಎ.ವಿ. ಎಂಬ ತರಬೇತಿ ನೀಡಿದರು. ಕೊಕ್ಕಡ ಕಪಿಲಾ ಜೇಸಿ ಘಟಕಾಧ್ಯಕ್ಷ ಜಿತೇಶ್ ಎಲ್ ಪಿರೇರಾರವರು ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಜೇಸಿ ವಿಭಾಗ ಮುಖ್ಯಸ್ಥರಾದ ದೀಪಾ ವಿ. ಜೇಸಿ ವಾಣಿ ವಾಚಿಸಿದರು. ಕೋಶಾಧಿಕಾರಿ ಜಸ್ವಂತ್ ಪಿರೇರಾ ಅವರು ಅತಿಥಿಗಳ ಪರಿಚಯ ಮಾಡಿದರು. ಇದೇ ವರ್ಷ ಜೆ.ಎಫ್.ಎಂ. ಪುರಸ್ಕಾರಗಳಿಸಿದ ಕೆ.ಶ್ರೀಧರ್ ರಾವ್ ಹಾಗೂ ಹೆಚ್.ಜಿ.ಎಫ್. ಫೆಲೋಶಿಪ್ ಪಡೆದ ಜೆಸಿಂತಾ ಡಿ ಸೋಜ ಅವರಿಗೆ ಪಿನ್ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.


ಜೋಯ್ ಬೊತೇಲೊ ಹಾಗೂ ಪ್ರಕಾಶ್ ಬೊತೇಲೊ ಅವರನ್ನು ಜೇಸಿಯ ಪ್ರಮಾಣ ವಚನ ನೀಡಿ ಜೇಸಿ ಅಧಿಕಾರಿಗಳು ಸ್ವಾಗತಿಸಿದರು. ಜಸ್ವಂತ್, ಶ್ರೀಧರ್ ರಾವ್ ಹಾಗೂ ಜೋಯಿ ಅವರು ತರಬೇತಿ ಕುರಿತು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಜೋಸೆಫ್ ಪಿರೇರಾ ಅವರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಕಾರ್ಯದರ್ಶಿ ವಿಕ್ಟರ್ ಸುವಾರಿಸ್ ವಂದಿಸಿದರು.

LEAVE A REPLY

Please enter your comment!
Please enter your name here