ಆಲಂಕಾರು ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಕ್ಕೆ ಶಾಸಕಿ ಭಾಗೀರಥಿ ಮುರುಳ್ಯರವರು ಭೇಟಿ

0

ಆಲಂಕಾರು: ಆಲಂಕಾರು ಶ್ರೀ ದುರ್ಗಾಟವರ್ ್ಸ ನಲ್ಲಿ ಕಾರ್ಯಚರಿಸುತ್ತಿದ್ದ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಸ್ಥಳಾಂತರಗೊಂಡು ಆಲಂಕಾರು ಕೆನರಾ ಬ್ಯಾಂಕ್ ನ ಮುಂಭಾಗದಲ್ಲಿ ಆಲಂಕಾರು ಗ್ರಾಮ ವನ್ ನಾಗರಿಕ ಸೇವಾ ಕೇಂದ್ರ ಹಾಗೂ ಸುದ್ದಿ ಮಾಹಿತಿ ಕೇಂದ್ರ ಕಾರ್ಯರಂಭಗೊಂಡಿದ್ದು, ಸುಳ್ಯ ವಿಧಾನ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಭೇಟಿ ನೀಡಿ ಗ್ರಾಮ ವನ್ ಕಛೇರಿ ಯಲ್ಲಿ ನಡೆಯುವ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದು ಗ್ರಾಮಾಂತರ ಪ್ರದೇಶಗಳಲ್ಲಿ ಸರಕಾರದ ವಿವಿಧ ಸವಲತ್ತುಗಳನ್ನು ಗ್ರಾಮವನ್ ನಾಗರಿಕ ಸೇವಾ ಕೇಂದ್ರದ ಮೂಲಕ ಜನರಿಗೆ ತಲುಪಿಸುವ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂಧರ್ಭದಲ್ಲಿ ಆಲಂಕಾರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ರಾದ ಪ್ರದೀಪ್ ರೈ ಮನವಳಿಕೆ, ದುರ್ಗಾಟವರ್ ್ಸ ನ ಮಾಲಕರಾದ ರಾಧಾಕೃಷ್ಣ ರೈ ಪರಾರಿಗುತ್ತು, ಆಲಂಕಾರು ಗ್ರಾ.ಪಂ ಸದಾನಂದ ಆಚಾರ್ಯ,ಕೋಟಿಚೆನ್ನಯ ಮಿತ್ರವೃಂದ ಅಧ್ಯಕ್ಷರಾದ ಜಯಂತ ಪೂಜಾರಿ ನೆಕ್ಕಿಲಾಡಿ,ಆಲಂಕಾರು ಗ್ರಾ.ಪಂ ಮಾಜಿ ಅಧ್ಯಕ್ಷ ಜಯಕರ ಪೂಜಾರಿ ಕಲ್ಲೇರಿ, ರಾಮಕುಂಜ ಗ್ರಾ.ಪಂ ಸದಸ್ಯ ಕೇಶವ ಗಾಂಧಿ ಪೇಟೆ, ಪ್ರಮುಖರಾದ ಗೋಪಾಲಕೃಷ್ಣ ಭಟ್ಟ್, ಶ್ರೀಧರ ಪೂಜಾರಿ ನೆಕ್ಕಿಲಾಡಿ, ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಆಲಂಕಾರು ಗ್ರಾಮವನ್ ನಾಗರಿಕ ಸೇವಾ ಕೇಂದ್ರದ ಸದಾಶಿವ ಶೆಟ್ಟಿ ಮಾರಂಗ ಸ್ವಾಗತಿಸಿ, ಗ್ರಾಮ ವನ್ ನಾಗರಿಕ ಸೇವಾಕೇಂದ್ರದ ಬಗ್ಗೆ ತಿಳಿಸಿ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here