ಉಪ್ಪಿನಂಗಡಿಯಲ್ಲಿ ಆಟಿ ಅಮಾವಾಸ್ಯೆಯ ತೀರ್ಥಸ್ನಾನ

0

ಉಪ್ಪಿನಂಗಡಿ: ಆಷಾಢ ಅಮವಾಸ್ಯೆಯ ಸೋಮವಾರದಂದು ನೂರಾರು ಭಕ್ತರು ಸಂಗಮ ಕ್ಷೇತ್ರ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಗತಿಸಿದ ಹಿರಿಯರಿಗೆ ಪಿತೃ ತರ್ಪಣ ಸಮರ್ಪಿಸಿ, ತೀರ್ಥ ಸ್ನಾನ ಗೈದರು.
ಮುಂಜಾನೆಯಿಂದಲೇ ದೇವಾಲಯಕ್ಕೆ ಆಗಮಿಸಿದ ಭಕ್ತರ ದಂಡು, ನದಿ ಸಂಗಮ ಸ್ಥಳದಲ್ಲಿ ಗತಿಸಿದ ಹಿರಿಯರಿಗೆ ನವ ಧಾನ್ಯಗಳನ್ನು ಗಂಗಾ ಮಾತೆಯ ಮೂಲಕ ಸಮರ್ಪಿಸಿ ಮೋಕ್ಷಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.

ಆಗಮಿಸಿದ ಭಕ್ತಾದಿಗಳಿಗೆ ದೇವಳದ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಅಗತ್ಯ ಅನುಕೂಲತೆಗಳನ್ನು ಕಲ್ಪಿಸಲಾಗಿತ್ತು. ನದಿಯಲ್ಲಿ ತರ್ಪಣ ಸಮರ್ಪಿಸುವ ಭಕ್ತಾದಿಗಳ ಸುರಕ್ಷತೆಗಾಗಿ ದಿನೇಶ್ ಬಿ. ನೇತೃತ್ವದ ಪ್ರವಾಹ ರಕ್ಷಣಾ ತಂಡ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿತ್ತು.

LEAVE A REPLY

Please enter your comment!
Please enter your name here