ಉಪ್ಪಿನಂಗಡಿಗೆ ನಟ ಶ್ರೀನಿವಾಸ ಮೂರ್ತಿ ಭೇಟಿ

0

ಹರೀಶ್ ಉಪಾಧ್ಯಾಯ ರವರ ನಿವಾಸದಲ್ಲಿ ಚಿತ್ರನಟ ಶ್ರೀನಿವಾಸ್ ಮೂರ್ತಿ ಮತ್ತವರ ಪರಿವಾರ

ಉಪ್ಪಿನಂಗಡಿ: ಕನ್ನಡ ಚಲನ ಚಿತ್ರ ರಂಗದ ಖ್ಯಾತ ಪೋಷಕ ನಟ ಶ್ರೀನಿವಾಸ್ ಮೂರ್ತಿ ಮತ್ತವರ ಕುಟುಂಬ ಸದಸ್ಯರು ಸೋಮವಾರದಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು.
ಆಷಾಢ ಅಮವಾಸ್ಯೆಯ ಅಂಗವಾಗಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿರುವ ಅವರು, ತಮ್ಮ ಕುಟುಂಬದ ಹಿರಿಯರಿಗೆ ತರ್ಪಣ ಬಿಟ್ಟು ಸದ್ಗತಿಯನ್ನು ಕೋರಿದರು. ಹಾಗೂ ದೇವಾಲಯದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಿದರು.
ಶ್ರೀನಿವಾಸ್ ಮೂರ್ತಿ ಮತ್ತವರ ಪತ್ನಿ ಹಾಗೂ ಮೊಮ್ಮಗಳು ಕ್ಷೇತ್ರ ಸಂದರ್ಶನ ನಡೆಸಿದ್ದು, ನಟ ಮತ್ತವರ ಪರಿವಾರಕ್ಕೆ ಶ್ರೀ ದೇವಳದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ ರವರು ತಮ್ಮ ನಿವಾಸದಲ್ಲಿ ಆತಿಥ್ಯ ನೀಡಿ ಸತ್ಕರಿಸಿದರು. ಈ ಸಂದರ್ಭದಲ್ಲಿ ವಸುಧಾ ಹರೀಶ್, ಶ್ರೀನಿಧಿ ಉಪಾಧ್ಯಾಯ, ಎಸ್.ಎಂ. ಶ್ರೀನಿವಾಸ್ ರಾವ್ ಜೊತೆಗಿದ್ದರು.

LEAVE A REPLY

Please enter your comment!
Please enter your name here